23.7 C
ಪುತ್ತೂರು, ಬೆಳ್ತಂಗಡಿ
April 24, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ: ರಸ್ತೆಯ ಬದಿ ನಿಲ್ಲಿಸಿದ್ದ ಬೈಕ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಧರ್ಮಸ್ಥಳ: ಇಲ್ಲಿಯ ಶ್ರೀ ಗಣೇಶ್‌ ಸ್ಟೋರ್‌ ಅಂಗಡಿ ಎದುರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಮೋಟಾರ್‌ ಸೈಕಲ್‌ (ಬೈಕ್) ಕಳವಾದ ಘಟನೆ ಜೂ.22 ರಂದು ನಡೆದಿದೆ.

ಧರ್ಮಸ್ಥಳ ರಾಜೇಶ್ ಕುಲಾಲ್,(31 ವರ್ಷ) ರವರ ದೂರಿನಂತೆ, ಜೂ.22 ರಂದು ಬೆಳಿಗ್ಗೆ, ಧರ್ಮಸ್ಥಳ ಗ್ರಾಮದ ಶ್ರೀ ಗಣೇಶ್‌ ಸ್ಟೋರ್‌ ಅಂಗಡಿ ಎದುರು ರಸ್ತೆಯ ಬದಿಯಲ್ಲಿ, ತನ್ನ ಬಾಬ್ತು ಮೋಟಾರ್‌ ಸೈಕಲ್‌ ನಂಬ್ರ KA70J4070 ಮೋಟಾರ್‌ ಸೈಕಲ್‌ ನಿಲ್ಲಿಸಿ ಹೋದವರು, ವಾಪಾಸು ಒಂದು ಗಂಟೆಯ ಬಳಿಕ ಹಿಂತಿರುಗಿ ಬಂದು ನೋಡಿದಾಗ, ರಾಜೇಶ್ ರವರ ಬಾಬ್ತು ಮೋಟಾರ್‌ ಸೈಕಲ್‌, ಅವರು ನಿಲ್ಲಿಸಿದ್ದ ಜಾಗದಲ್ಲಿ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಮೋಟಾರ್‌ ಸೈಕಲ್‌ ನ್ನು ಸುತ್ತಮುತ್ತ ಹುಡುಕಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಕಳವಾದ ಮೋಟಾರ್‌ ಸೈಕಲ್‌ ನ ಅಂದಾಜು ಮೌಲ್ಯ ರೂ 30000/- ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ, ಅಪರಾಧ ಕ್ರಮಾಂಕ: 49/2024 ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಪಂಚಾಯತ್ ಕಾಮಗಾರಿಗಳನ್ನು ನಡೆಸಲು ಇಂಜಿನಿಯರ್ ಗಳ ಕೊರತೆ: ಕೂಡಲೇ ಸರಕಾರ ಕ್ರಮ ಜರುಗಿಸುವಂತೆ ಕೊಕ್ಕಡ ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ ಗೌಡ ಒತ್ತಾಯ

Suddi Udaya

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ನಟ ರಮೇಶ್ ಅರವಿಂದ್‌ ರವರಿಗೆ ಗೌರವ

Suddi Udaya

ಕಾಕ೯ಳದಲ್ಲಿ ಚಾಕುವಿನಿಂದ ಇರಿದು ನವೀನ್ ಪೂಜಾರಿ ಹತ್ಯೆ : ಆರೋಪಿ ನಡ ಗ್ರಾಮದ ಪರೀಕ್ಷಿತ್ ಬಂಧನ

Suddi Udaya

ಜ್ಞಾನ ಪೀಠ ಪುರಸ್ಕೃತರು: ಉಪನ್ಯಾಸ ಮಾಲೆ ಕಾರ್ಯಕ್ರಮದ ಉದ್ಘಾಟನೆ

Suddi Udaya

ಸಂಬೋಳ್ಯದ ಮೃತ ಬಾಲಕ ಸುಮಂತ್ ಮನೆಗೆ ಸಂಸದ ಬ್ರಿಜೇಶ್ ಚೌಟ ಭೇಟಿ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!