ಬೆಳ್ತಂಗಡಿ ಕೋಟಕ್ ಲೈಫ್ ಕಚೇರಿಯಲ್ಲಿ ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ‍ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ : ಕೋಟಕ್ ಲೈಫ್ ಕಚೇರಿ ಬೆಳ್ತಂಗಡಿಯಲ್ಲಿ ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ‍ರವರಿಗೆ ಸನ್ಮಾನಿಸಲಾಯಿತು.

ಸುಮಾರು 35 ವರ್ಷದ ಇವರ ಕರ್ತವ್ಯ ಸೇವೆಯಲ್ಲಿ , 25 ವರ್ಷಗಳ ಕಾಲ ಬೆಳ್ತಂಗಡಿ ತಾಲೂಕಿನಲ್ಲಿ ಸೇವೆ ಸಲ್ಲಿಸಿದ ಹೂಗಾರರಿಗೆ ಸನ್ಮಾನ ಮಾಡಿ ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಬ್ರಾಂಚ್ ಮ್ಯಾನೇಜರ್ ಪ್ರಜ್ವಲ್ ಟಿ. ಕೆ., ಚೀಫ್ ಎಜೆನ್ಸಿ ಪಾರ್ಟ್ನರ್ ದಿನಕರ್ ಕೆ, ಎಜೆನ್ಸಿ ಪಾರ್ಟ್ನರ್ ಯೋಗೀಶ್ ಆಳಂಬಿಲ ಉಪಸ್ಥಿತರಿದ್ದರು. ಗಂಗಾಧರ ಸನ್ಮಾನ ಪತ್ರ ಓದಿ ಸ್ವಾಗತಿಸಿದರು.

Leave a Comment

error: Content is protected !!