July 24, 2026
Uncategorized

ಬೆಳ್ತಂಗಡಿ 3 ಸ್ಟಾರ್ ವೈನ್ಸ್’ ಶಾಪ್ ಗೆ ಅಬಕಾರಿ ಇಲಾಖೆಯಿಂದ ಬೀಗ

ಬೆಳ್ತಂಗಡಿ : ಮಾಜಿ ಶಾಸಕ ವಸಂತ ಬಂಗೇರ ನಿಧನದ ಬಳಿಕ ಅಬಕಾರಿ ಕಾನೂನು ಪ್ರಕಾರ ಮಾಲೀಕತ್ವ ಬದಲಾಯಿಸದ ಕಾರಣದಿಂದ ಬೆಳ್ತಂಗಡಿಯ ‘3 ಸ್ಟಾರ್ ವೈನ್ಸ್ ಶಾಪ್ ಗೆ ಬೆಳ್ತಂಗಡಿ ಅಬಕಾರಿ ಇಲಾಖೆ ಬೀಗ ಹಾಕಿದೆ.
ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ರುವ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ದಿ. ಮಾಜಿ ಶಾಸಕ ಕೆ.ವಸಂತ ಬಂಗೇರರ ಮಾಲೀಕತ್ವದ ‘3 ಸ್ಟಾರ್ ವೈನ್ಸ್ ಶಾಪ್’ ಗೆ ಮಾಲೀಕತ್ವ ಬದಲಾವಣೆ ಮಾಡದ ಕಾರಣದಿಂದ ಬೆಳ್ತಂಗಡಿ ಅಬಕಾರಿ ಇಲಾಖೆ ಜೂ.22 ರಂದು ಸಂಜೆ 6 ಗಂಟೆಗೆ ಬೀಗ ಹಾಕಿ ಸಿಲ್ ಹಾಕಿದೆ.


ಕರ್ನಾಟಕ ಅಬಕಾರಿ ಕಾನೂನು ಪ್ರಕಾರ ಅಬಕಾರಿ ಮದ್ಯ ಮಾರಾಟ ಮಾಡುವ ಮಾಲೀಕ ಮರಣದ ಬಳಿಕ 45 ದಿನದ ಒಳಗಡೆ ಕುಟುಂಬದ ಪತ್ನಿ ಅಥವಾ ಮಕ್ಕಳ ಹೆಸರಿಗೆ ಮಾಲೀಕತ್ವ ಬದಲಾವಣೆ ಮಾಡಿಕೊಂಡು ಲೈಸನ್ಸ್ ರಿನಿವಲ್ ಮಾಡಿಸುವ ನಿಯಮ ಜಾರಿಯಲ್ಲಿದೆ. ಆದರೆ ಬಂಗೇರ ಅವರು ವಿಧಿವಶರಾಗಿ 45 ದಿನ ಕಳೆದರೂ ಮಾಲೀಕತ್ವ ಬದಲಾವಣೆ ಮಾಡದ ಕಾರಣ ಬೆಳ್ತಂಗಡಿ ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ಲಕ್ಷ್ಮಣ್ ಉಪ್ಪಾರ್ ನಿಯಮ ಪ್ರಕಾರ ವೈನ್ಸ್ ಶಾಪ್ ಗೆ ಬೀಗ ಹಾಕಿ ಸಿಲ್ ಮಾಡಿದ್ದಾರೆ ಎಂದು ವರದಿಯಾಗಿದೆ.

Related posts

ಭಾರೀ ಮಳೆ ಹಿನ್ನೆಲೆ: ಇಂದು (ಮೇ 30) ದ.ಕ.ಜಿಲ್ಲೆಯ ಶಾಲೆಗಳಿಗೆ ರಜೆಘೋಷಣೆ

Suddi Udaya

ದೀಪಾವಳಿ ಗೋ ಪೂಜೆ ಪ್ರಯುಕ್ತ ಡಾ| ಡಿ. ವೀರೇಂದ್ರ ಹೆಗ್ಗಡೆ ದಂಪತಿಯಿಂದ ಗೋವುಗಳಿಗೆ ಉಪಾಹಾರ

Suddi Udaya

ಗೇರುಕಟ್ಟೆ 52ನೇ ವಷ೯ದ ಶ್ರೀ ಗಣೇಶೋತ್ಸವ ಪ್ರಯುಕ್ತ ಕೆಸರ್ಡೊಂಜಿದಿನ

Suddi Udaya

ಸರಳಿಕಟ್ಟೆ ಗೈಸ್ ವತಿಯಿಂದ 175 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ.

Suddi Udaya

ಗುರುವಾಯನಕೆರೆ ಶಕ್ತಿನಗರದ ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಪೊಲೀಸ್ ದಾಳಿ: ಇಬ್ಬರ ಬಂಧನ

Suddi Udaya

ತಣ್ಣೀರುಪಂತ ಗ್ರಾಮ ಪಂಚಾಯತ್ ನಲ್ಲಿ ಶಾಂತಿ ಸಭೆ

Suddi Udaya
error: Content is protected !!