ನಡ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಮಿತಿಯಿಂದ ದಿ. ಕೆ ವಸಂತ ಬಂಗೇರರಿಗೆ ನುಡಿನಮನ

Suddi Udaya

ನಡ: ಶ್ರೀ ಗುರು ನಾರಾಯಣ ಸ್ವಾಮಿ ಮಂದಿರದಲ್ಲಿ ಮಾಸಿಕ ಭಜನೆ ಗುರುಪೂಜೆಯ ನಂತರ ಬಿಲ್ಲವ ಸಮಾಜದ ಹಿರಿಯ ನಾಯಕರು, ಮಾಜಿ ಶಾಸಕ ದಿ.ಕೆ ವಸಂತ ಬಂಗೇರ ಇವರಿಗೆ ನುಡಿನಮನ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಮ್ ಕೆ ಪ್ರಸಾದ್, ಗು. ಸ್ವಾ ಸೇವಾ ಸಮಿತಿ ಅಧ್ಯಕ್ಷ ವೀರಪ್ಪ ಪೂಜಾರಿ ಕೊಟ್ಲಪ್ಪಾಡಿ, ಉಪಾಧ್ಯಕ್ಷರಾದ ದಿವಾಕರ ಸಾಲ್ಯಾನ್ ಸುರ್ಯ, ಜಯಕುಮಾರ್ ಸುರ್ಯ, ದೇವೇಂದ್ರ ಪೂಜಾರಿ ಕುದುಪುಲ, ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇದರ ನಿರ್ದೇಶಕರಾದ ಆದರ್ಶ್ ನೂಚಿಲ, ವಸಂತಿ ವಸಂತ ಕುತ್ರೊಟ್ಟು ಮತ್ತು ಎಲ್ಲಾ ಪದಾಧಿಕಾರಿಗಳು, ಗೌರವ ಸಲಹೆಗಾರರು, ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ವೀರಪ್ಪ ಪೂಜಾರಿ ಸ್ವಾಗತಿಸಿದರು. ದಿವಾಕರ ಸುರ್ಯ ವಂದಿಸಿದರು. ಮೀನಾಕ್ಷಿ ಕೆ ಭಂಡಾರಿಕೋಡಿ ನಿರೂಪಿಸಿದರು.

Leave a Comment

error: Content is protected !!