July 23, 2026
Uncategorized

ಬೆಳ್ತಂಗಡಿ 3 ಸ್ಟಾರ್ ವೈನ್ಸ್’ ಶಾಪ್ ಗೆ ಅಬಕಾರಿ ಇಲಾಖೆಯಿಂದ ಬೀಗ

ಬೆಳ್ತಂಗಡಿ : ಮಾಜಿ ಶಾಸಕ ವಸಂತ ಬಂಗೇರ ನಿಧನದ ಬಳಿಕ ಅಬಕಾರಿ ಕಾನೂನು ಪ್ರಕಾರ ಮಾಲೀಕತ್ವ ಬದಲಾಯಿಸದ ಕಾರಣದಿಂದ ಬೆಳ್ತಂಗಡಿಯ ‘3 ಸ್ಟಾರ್ ವೈನ್ಸ್ ಶಾಪ್ ಗೆ ಬೆಳ್ತಂಗಡಿ ಅಬಕಾರಿ ಇಲಾಖೆ ಬೀಗ ಹಾಕಿದೆ.
ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ರುವ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ದಿ. ಮಾಜಿ ಶಾಸಕ ಕೆ.ವಸಂತ ಬಂಗೇರರ ಮಾಲೀಕತ್ವದ ‘3 ಸ್ಟಾರ್ ವೈನ್ಸ್ ಶಾಪ್’ ಗೆ ಮಾಲೀಕತ್ವ ಬದಲಾವಣೆ ಮಾಡದ ಕಾರಣದಿಂದ ಬೆಳ್ತಂಗಡಿ ಅಬಕಾರಿ ಇಲಾಖೆ ಜೂ.22 ರಂದು ಸಂಜೆ 6 ಗಂಟೆಗೆ ಬೀಗ ಹಾಕಿ ಸಿಲ್ ಹಾಕಿದೆ.


ಕರ್ನಾಟಕ ಅಬಕಾರಿ ಕಾನೂನು ಪ್ರಕಾರ ಅಬಕಾರಿ ಮದ್ಯ ಮಾರಾಟ ಮಾಡುವ ಮಾಲೀಕ ಮರಣದ ಬಳಿಕ 45 ದಿನದ ಒಳಗಡೆ ಕುಟುಂಬದ ಪತ್ನಿ ಅಥವಾ ಮಕ್ಕಳ ಹೆಸರಿಗೆ ಮಾಲೀಕತ್ವ ಬದಲಾವಣೆ ಮಾಡಿಕೊಂಡು ಲೈಸನ್ಸ್ ರಿನಿವಲ್ ಮಾಡಿಸುವ ನಿಯಮ ಜಾರಿಯಲ್ಲಿದೆ. ಆದರೆ ಬಂಗೇರ ಅವರು ವಿಧಿವಶರಾಗಿ 45 ದಿನ ಕಳೆದರೂ ಮಾಲೀಕತ್ವ ಬದಲಾವಣೆ ಮಾಡದ ಕಾರಣ ಬೆಳ್ತಂಗಡಿ ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ಲಕ್ಷ್ಮಣ್ ಉಪ್ಪಾರ್ ನಿಯಮ ಪ್ರಕಾರ ವೈನ್ಸ್ ಶಾಪ್ ಗೆ ಬೀಗ ಹಾಕಿ ಸಿಲ್ ಮಾಡಿದ್ದಾರೆ ಎಂದು ವರದಿಯಾಗಿದೆ.

Related posts

ಅಳದಂಗಡಿ: ಮಾಗ್ದೇಲಿನ್ ಪಿಂಟೋ ನಿಧನ

Suddi Udaya

ಮೈರೋಳ್ತಡ್ಕ ಇದರ ಸಂಯುಕ್ತ ಆಶ್ರಯದಲ್ಲಿ 35ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

Suddi Udaya

ಜೂ.16: ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಎರಡನೇ ಅವಧಿಗೆ ಮೀಸಲಾತಿ ನಿಗದಿ

Suddi Udaya

ರೀಲ್ಸ್‌ ತಾರೆ ಇದೀಗ ಸೀರಿಯಲ್ ಬೆಡಗಿ: ನಾರಾವಿಯ ಕೃಷ್ಣಪ್ರಿಯಾ ಭಟ್ ನಂದಗೋಕುಲದಲ್ಲಿ ರಕ್ಷಾ

Suddi Udaya

ಆಹಾರ ತಯಾರಿಕೆ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ: ಇನ್ನೆರಡು ದಿನಗಳಲ್ಲಿಆದೇಶ : ಸಚಿವ ದಿನೇಶ್ ಗುಂಡೂರಾವ್

Suddi Udaya

ಲೋಕಸಭಾ ಚುನಾವಣೆ: ಭಾರತೀಯ ಜನತಾ ಪಾರ್ಟಿ‌ ಬೆಳ್ತಂಗಡಿ ಮಂಡಲ ಇದರ ನೇತೃತ್ವದಲ್ಲಿ ಬೃಹತ್ ರೋಡ್ ಶೋ:ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮತ ಯಾಚನೆ

Suddi Udaya
error: Content is protected !!