ಉಜಿರೆ: ಹಳೆಪೇಟೆ ಎಸ್.ಡಿ.ಟಿ.ಯು ಆಟೋ ಯೂನಿಯನ್ ವಾರ್ಷಿಕ ಮಹಾಸಭೆ

Suddi Udaya

ಉಜಿರೆ: ಎಸ್. ಡಿ. ಟಿ. ಯು. ಹಳೆಪೇಟೆ, ಉಜಿರೆ ಯೂನಿಯನ್ ನ 3ನೇ ವರ್ಷದ ಮಹಾಸಭೆ ಜೂ. 25 ರಂದು ಬಶೀರ್ ಅತ್ತಾಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಆಯುಕ್ತರು ಅರ್ಜುನ್ ಕುಮಾರ್ ಆಟೋ ಯೂನಿಯನ್ ಕುರಿತು ಮಾತನಾಡಿದರು. ಎಸ್.ಡಿ.ಟಿ.ಯು. ಬೆಳ್ತಂಗಡಿ ತಾಲೂಕು ಅಧ್ಯಕ್ಷರು ಸ್ವಾಲಿಹ್ ಮದ್ದಡ್ಕ, ಕಾರ್ಯದರ್ಶಿ ರಿಯಾಜ್ ಮದ್ದಡ್ಕ ಹಾಗೂ ಎಸ್. ಡಿ. ಟಿ. ಯು. ಯೂನಿಯನ್ ನ ಸದಸ್ಯರು ಉಪಸ್ಥಿತರಿದ್ದರು.

ಸ್ವಾಲಿಹ್ ಮದ್ದಡ್ಕ ನೇತೃತ್ವದಲ್ಲಿ ನೂತನ ಕಮಿಟಿ ರಚಿಸಲಾಯಿತು.

ನೂತನ ಗೌರವಾಧ್ಯಕ್ಷರಾಗಿ ಆರೀಫ್ ಎ.ಎಮ್ ಕುಂಟಿನಿ, ಅಧ್ಯಕ್ಷರಾಗಿ ಶರೀಫ್ ಅತ್ತಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಕುಂಟಿನಿ, ಉಪಾಧ್ಯಕ್ಷರಾಗಿ ರಹೀಮ್ ಯು.ಕೆ ಕುಂಟಿನಿ, ಜೊತೆಕಾರ್ಯದರ್ಶಿಯಾಗಿ ಮಸೂದ್ ಕಾಶಿಬೆಟ್ಟು, ಕೋಶಾಧಿಕಾರಿಯಾಗಿ ಖಾದರ್ ನಾಡ್ಜೆ ಆಯ್ಕೆಯಾದರು.

Leave a Comment

error: Content is protected !!