ಯೂನಿಯನ್ ಬ್ಯಾಂಕ್ ಎಂದು ಸಂದೇಶ ಕಳುಹಿಸಿ ಲಕ್ಷಾಂತರ ರೂ. ವಂಚನೆ: ಹಣ ಕಳೆದುಕೊಂಡ ಕೊಕ್ಕಡದ ನಿವಾಸಿಯಿಂದ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲು

Suddi Udaya

ಕೊಕ್ಕಡ: ಮೊಬೈಲ್ ವಾಟ್ಸ್ ಆಯಪ್ ನಲ್ಲಿ ಯೂನಿಯನ್ ಬ್ಯಾಂಕ್ ಎಂದು ಲಿಂಕ್ ಕಳಿಸಿ ಲಕ್ಷಾಂತರ ಹಣ ದೋಚಿ ವಂಚಿಸಿದ ಘಟನೆ ಜೂ.30 ರಂದು ಕೊಕ್ಕಡದಲ್ಲಿ ನಡೆದಿದೆ.

ಅಪರಿಚಿತ ವ್ಯಕ್ತಿಯೋರ್ವರು ಕೊಕ್ಕಡ ಗ್ರಾಮದ ಬಡೆಕೈಲ್ ನಿವಾಸಿ ಶ್ರೀನಾಥ್ ರವರು ರವರ ಮೊಬೈಲ್ ಗೆ ಯೂನಿಯನ್ ಬ್ಯಾಂಕ್ ಎಂದು ಮೇಸೆಜ್ ಕಳಿಸಿ, ಡೌನ್ ಲೋಡ್ ಮಾಡುವಂತೆ ಲಿಂಕ್ ಇರುವ ಮೆಸೇಜ್ ಕಳಿಸಿಕೊಟ್ಟಿದನ್ನು ಓಪನ್ ಮಾಡಿ, ಒಟಿಪಿ ನೀಡಿ ರೂ.1 ಲಕ್ಷ ವಂಚಿಸಿದ ಘಟನೆ ನಡೆದಿದೆ. ಈ ಬಗ್ಗೆ ಧರ್ಮಸ್ಥಳ ಸೈಬರ್ ಕ್ರೈಂ ಗೆ ಹಾಗೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!