ಮಚ್ಚಿನ ಗ್ರಾಮದ ಕಿನ್ನಿಪಲ್ಕೆ ಜಯ ಪೂಜಾರಿ ರವರ ಹಟ್ಟಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹಾನಿಯಾದ ಘಟನೆ ಜು.6 ರಂದು ರಾತ್ರಿ ನಡೆದಿದೆ.

ಹಟ್ಟಿಯಲಿದ್ದ ತೆಂಗಿನಕಾಯಿ, ಮಳೆಗಾಲಕ್ಕೆ ಶೇಖರಿಸಿ ಇಟ್ಟಿದ್ದ ಕಟ್ಟಿಗೆ ಹಾಗೂ ಇತರ ವಸ್ತುಗಳು ಸಂಪೂರ್ಣ ಸುಟ್ಟ ಹೋಗಿದ್ದು ಅಪಾರ ನಷ್ಟವಾಗಿದೆ.

ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಗ್ರಾಮಕರೀಣಿಕ ಸತೀಶ್ ಪಿಂಟೋ ಭೇಟಿ ನೀಡಿ ಪರಿಶೀಲಿಸಿದರು.













