ಬೆಳ್ತಂಗಡಿ ಕರ್ನಾಟಕ ಗಮಕ ಕಲಾ ಪರಿಷತ್, ವತಿಯಿಂದ ‘ಮನೆ ಮನೆ ಗಮಕ’ ವಿನೂತನ ಕಾರ್ಯಕ್ರಮ

Suddi Udaya

ಧರ್ಮಸ್ಥಳ :ಕರ್ನಾಟಕ ಗಮಕ ಕಲಾ ಪರಿಷತ್, ಬೆಳ್ತಂಗಡಿ ಇದರ ವತಿಯಿಂದ ಮನೆ ಮನೆ ಗಮಕ ಎನ್ನುವ ವಿನೂತನ ಕಾರ್ಯಕ್ರಮವು ತುಳು ಶಿವಳ್ಳಿ ಸಭಾ, ಧರ್ಮಸ್ಥಳ ವಲಯದ ಗೌರವಧ್ಯಕ್ಷರಾದ ಗಿರೀಶ ಕುದ್ರೆoತಾಯ ರ ಶಿವ ಪಾರ್ವತಿ ಕೃಪಾದಲ್ಲಿ ನಡೆಯಿತು.


ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಫ್ರೋ. ಮಧೂರು ಮೋಹನ ಕಲ್ಲುರಾಯ, ತಾಲೂಕು ಅಧ್ಯಕ್ಷರಾದ ರಾಮಕೃಷ್ಣ ಭಟ್, ನಿನ್ನಿಕಲ್ಲು, ಹಿರಿಯ ಯಕ್ಷಗಾನ ಧೂರಿಣ ಶ್ರೀ ಭುಜಬಲಿ, ತುಳು ಶಿವಳ್ಳಿ ಸಭಾ ಧರ್ಮಸ್ಥಳ ವಲಯದ ಅಧ್ಯಕ್ಷರಾದ ಡಾ. ಶ್ರೀಪತಿ ಅoರ್ಮುಡತ್ತಾಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಪಡುವೆಟ್ನಾಯ, ಗಮಕ ಕಲಾ ಪರಿಷತ್ತಿನ ಪದಾಧಿಕಾರಿಗಳು, ಗಿರೀಶ ಕುದ್ರೆoತಾಯರ ಕುಟುಂಬ ವರ್ಗ ದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಗಮಕ ವಾಚನವನ್ನು ಜಯರಾಮ ಕುದ್ರೆoತಾಯರು, ವ್ಯಾಖ್ಯಾನವನ್ನು ಹಿರಿಯ ಕಲಾವಿದರಾದ ಸುರೇಶ ಕುದ್ರೆoತಾಯರು ಬಹಳ ರಸವತ್ತಾಗಿ ನಿರ್ವಹಿಸಿದರು. ಇವರ ಜೊತೆ ಉಡುಪಿಯ ರವರು ವ್ಯಾಖ್ಯಾನ ಕಾರರಾಗಿ ಜೊತೆಯಾದದ್ದು ವಿಶೇಷವಾಗಿತ್ತು.
ರಾಮಕೃಷ್ಣ ಭಟ್ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಪಡುವೆಟ್ನಯರು ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ವಾಚನ, ಪ್ರವಚನ ಕಾರರನ್ನು ಹಾಗೂ ಜಿಲ್ಲಾಧ್ಯಕ್ಷರನ್ನು ಶಾಲು ಹಾಕಿ ಗೌರವಿಸಲಾಯಿತು

Leave a Comment

error: Content is protected !!