30.7 C
ಪುತ್ತೂರು, ಬೆಳ್ತಂಗಡಿ
May 17, 2025
ಪ್ರಮುಖ ಸುದ್ದಿ

ಬಂಟ್ವಾಳ ತಾಲೂಕು ಹಾಗೂ ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ ಬೆಂಚಿನಡ್ಕ – ಕಾಜಲ ಪರಿಸರದ ದಯನೀಯ ಸ್ಥಿತಿ:ಎರಡೂವರೆ ಅಡಿ ಅಗಲದ ಕಿರು ಜಾಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ

ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ನೈನಾಡು ಮತ್ತು ಬೆಳ್ತಂಗಡಿ ತಾಲೂಕಿನ ಕಾಜಲ ಪ್ರದೇಶ ಕ್ಕೆ ಸಂಪರ್ಕ ರಸ್ತೆ ಯ ಮಧ್ಯೆ ತೊರೆಯೊಂದು ಹರಿಯುತ್ತಿದ್ದು ಇದಕ್ಕೆ ಸೇತುವೆ ನಿರ್ಮಾಣ ಮಾಡಲು ಬಹಳಷ್ಟು ಕಾಲದಿಂದ ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮಾಡಿರುವ ಎರಡೂವರೆ ಅಡಿ ಅಗಲದ ಕಿರು ಜಾಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಈ ಭಾಗದ ಜನರದ್ದು. ಪ್ರತಿ ನಿತ್ಯ ಸರ್ಕಾರಿ ಪ್ರೌಢಶಾಲೆ
ಕಿರಿಯ ಪ್ರಾಥಮಿಕ ಶಾಲೆಅಂಗನವಾಡಿ ಕೇಂದ್ರ ಗಳಿಗೆ ಮಕ್ಕಳು ,.ಹಾಲು ಉತ್ಪಾದಕ ರೈತರು ಇದೇ ದಾರಿಯಲ್ಲಿ ಡಿಪೋ ಗಳಿಗೆ .ಇದೇ ದಾರಿಯಾಗಿ ಬರಬೇಕು

ಶಾಲಾ ವಿದ್ಯಾರ್ಥಿಗಳು ಸೇರಿ ನೂರಾರು ಜನರು ಈ ಕಿರು ದಾರಿಯಲ್ಲೇ ಸಾಗಬೇಕಾಗಿದೆ. ಇದರ ಹೊರತಾಗಿ ಮಾರ್ಗ ವನ್ನು ಅವಲಂಬಿಸಿ ಬರಬೇಕಾದರೆ ಪುರಿಯ, ಪುಂಜಾಲಕಟ್ಟೆ, ಮೂರ್ಜೆ, ದಾರಿಯಾಗಿ ನೈನಾಡಿಗೆ ಸುಮಾರು 15 ಕೀ ಮೀ ಸುತ್ತಿ ಬರಬೇಕು. ಮಳೆಗಾಲದಲ್ಲಿ ತೊರೆ ತುಂಬಿ ಹರಿದಾಗ ಮಕ್ಕಳಾದಿಯಾಗಿ ಜನರೆಲ್ಲರೂ ನೀರು ಇಳಿಯುವ ತನಕ ಕಾದು ಕುಳಿತು ಕೊಳ್ಳಬೇಕಾದ ಪರಿಸ್ಥಿತಿ. ಏನಾದರೂ ಆಕಸ್ಮಿಕ, ಸಂಭವಿಸಿದರೆ ದೇವರೆ ಗತಿ. ಕಾಜಲ ದ ಅಸು ಪಾಸಿನ ಜನತೆಯ ಕೂಗು ಅರಣ್ಯ ರೋಧನ ವಾಗಿದೆ
ಇವತ್ತು ವಯೋ ವೃದ್ಧರೋರ್ವರು ಮರಣ ಹೊಂದಿದ್ದು, ಅವರ ಅಂತ್ಯಕ್ರಿಯೆ ನಡೆಸಲು ದೇಹವನ್ನು ಸರಿ ಸುಮಾರು ಒಂದು ಕಿಲೋಮೀಟರ್ ದೂರದ ತನಕ ಹೊತ್ತು ತಂದು ನಂತರ ಅಂಬ್ಯುಲೆನ್ಸ್ ಮುಖೇನ ಸ್ಮಶಾನ ಕ್ಕೆ ಸಾಗಿಸಲಾಯಿತು. ತುಂಬಿ ಹರಿಯುತ್ತಿರುವ ತೊರೆಯ ಮೇಲಿನ ಕಿಂಡಿ ಅಣೆಕಟ್ಟಿನ ಕಿರು ದಾರಿಯಲ್ಲಿ ಬಹಳ ಪ್ರಯಾಸಪಟ್ಟು ಮರಣವನ್ನು ಹೊತ್ತು ಕೊಂಡು ಬರಬೇಕಾದ ದೃಶ್ಯ ಮೂಲಭೂತ ಸೌಕರ್ಯಗಳ ಕುಂದುಕೊರತೆ ಗೆ ಜ್ವಲಂತ ಸಾಕ್ಷಿಯಾಗಿತ್ತು

Related posts

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ರಾಷ್ಟ್ರೀಯ ತನಿಖಾ ತಂಡದಿಂದ ತನಿಖೆಯಾಗಬೇಕು : ಶಾಸಕ ಹರೀಶ್ ಪೂಂಜ ಆಗ್ರಹ

Suddi Udaya

ಕೆರೆಗೆ ಜಾರಿ ಬಿದ್ದು ಗರ್ಡಾಡಿ ನಿವಾಸಿ ನವ ವಿವಾಹಿತ ಸಾವು

Suddi Udaya

ಧರ್ಮಸಂರಕ್ಷಣ ಯಾತ್ರೆಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಪ್ಲಾನ್” : : ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಈ ಸುದ್ದಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಬ್ಲಾಕ್ ಕಾಂಗ್ರೆಸ್ ಉಭಯ ಸಮಿತಿ ಅಧ್ಯಕ್ಷರುಗಳ ಸ್ಪಷ್ಟನೆ

Suddi Udaya

ಗಾಳಿ ಮಳೆಗೆ ಕೂತ್ರೋಟ್ಟು ನಿವಾಸಿ ಗಿರಿಜಾ ಅವರ ಮನೆಗೆ ಮರ ಬಿದ್ದು ಹಾನಿ

Suddi Udaya

ರಾಜ್ಯದಲ್ಲಿ ಸ್ವಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಿಜೆಪಿಯ ಯಾವುದೇ ಶಾಸಕರು ಕಾಂಗ್ರೆಸ್‌ ಪಕ್ಷಕೆ ಹೋಗುತ್ತಿಲ್ಲ: ಈಶ್ವರಪ್ಪ

Suddi Udaya

ಮಾಚಾರಿನಲ್ಲಿ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ: ಸ್ಥಳಕ್ಕೆ ಪೊಲೀಸರ‌ ಆಗಮನ ಮುಂದುವರಿದ ತನಿಖೆ

Suddi Udaya
error: Content is protected !!