23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣ ಗೋಡೆ ಕುಸಿತ: ನೀರಿನ ಪಂಪ್ ಶೆಡ್ ಹಾಗೂ ವಿದ್ಯುತ್ ಕಂಬಕ್ಕೆ ಹಾನಿ

ನಾವೂರು : ಜು.6 ರಂದು ಸಂಜೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಾವೂರು ಇದರ ಬಲ ಬದಿಯ ಆವರಣಗೋಡೆ , ವಿದ್ಯುತ್ ಕಂಬ, ಹಾಗೂ ಗ್ರಾಮ ಪಂಚಾಯತ್ ನೀರು ಸರಬರಾಜು ಪಂಪ್ ಶೆಡ್ ಬಿದ್ದಿದ್ದು, ದೈವದ ಕಟ್ಟೆ ಕೂಡಾ ಜರಿಯುವ ಹಂತದಲ್ಲಿದೆ.


ದೇವಸ್ಥಾನದ ಬಲಬದಿ ಮನೆಯೊಂದಿದ್ದು ಅವರು ತನ್ನ ಜಾಗವನ್ನು ಇತ್ತೀಚೆಗೆ ಸಮತಟ್ಟುಗೊಳಿಸಿದ್ದರು.ಈ ಸಂಧರ್ಭ ದೇವಸ್ಥಾನದ ಅಧ್ಯಕ್ಷರು ಸಮಸ್ಯೆಯಾಗದಂತೆ ಸಮತಟ್ಟುಗೊಳಿಸುವಂತೆ ಸೂಚಿಸಿದ್ದರು. ದೇವಸ್ಥಾನದ ಜಾಗ ಇವರ ಜಾಗಕ್ಕಿಂತ 15- 20ಅಡಿ ಎತ್ತರದಲ್ಲಿದ್ದು, ಸಮತಟ್ಟು ಮಾಡುವ ವೇಳೆ ನೀರು ಹರಿಯುವ ಕಣಿಯನ್ನು ಕೂಡಾ ತೆಗೆದಿದ್ದರು. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮ ಪಂಚಾಯತ್ ಹಾಗೂ ತಹಶೀಲ್ದಾರಿಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಹಾಗೂ ಮೆಸ್ಕಾಂ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related posts

ಮತ ಚಲಾಯಿಸಿದ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಹಿಲನ್

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ರೂ.59 ಲಕ್ಷ ಲಾಭ, ಶೇ.15 ಡಿವಿಡೆಂಟ್ ಘೋಷಣೆ

Suddi Udaya

ಕಳೆಂಜ : ಜನನಿ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ರಾಜ್ಯಮಟ್ಟದ ಎಸ್ ಡಿ ಎಂ ಬಿ.ವೊಕ್ ಉತ್ಸವ : ವಾಣಿ ಪ. ಪೂ. ಕಾಲೇಜಿಗೆ ದ್ವಿತೀಯ ಸ್ಥಾನ

Suddi Udaya

ಸುಪ್ರೀಂ ಸೋಫಾ ಮಾರ್ಟ್, ಇಲೆಕ್ಟ್ರಾನಿಕ್ಸ್- ಫರ್ನಿಚರ್ಸ್ 3 ಲಕ್ಕಿ ಸ್ಕಿಂ ನ ಗ್ರ್ಯಾಂಡ್ ಫಿನಾಲೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ

Suddi Udaya
error: Content is protected !!