ಗೇರುಕಟ್ಟೆ: ಸ್ಥಳೀಯ ಯುವಕರ ತಂಡದಿಂದ ರಸ್ತೆ ದುರಸ್ಥಿ

Suddi Udaya

Updated on:

ಗೇರುಕಟ್ಟೆ: ಇಲ್ಲಿಯ ಮಲ್ಲೊಟ್ಟು ರಸ್ತೆಯ ಶಕ್ತಿಸದನ ಬಳಿ ಹರ್ಪಲ ಭಂಡಾರಿಕೋಡಿ ಕೊಯ್ಯೂರಿಗೆ ಹೋಗುವ ರಸ್ತೆಯು ಹದಗೆಟ್ಟಿದ್ದು ಸಾರ್ವಜನಿಕರು ಓಡಾಡಲು ಪರದಾಡುತಿದ್ದರು. ಸಮಸ್ಯೆಯನ್ನು ಮನಗಂಡ ಸ್ಥಳೀಯ ಯುವಕರ ತಂಡ ರಸ್ತೆಯನ್ನು ದುರಸ್ಥಿಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಸ್ಥಳೀಯರಾದ ಪುರಂದರ ಶೆಟ್ಟಿ ಬಂಡಾರಿಕೊಡಿ, ಜಯಕರ ಶೆಟ್ಟಿ, ಕೇಶವ, ಗಿರೀಶ್, ನಿತಿನ್, ನವೀನ್, ಮನೋಹರ, ರವಿ, ಜಗದೀಶ್ ಹರ್ಪಲ, ಪ್ರಸಾದ್ ಹರ್ಪಲ, ಅರವಿಂದ ಹರ್ಪಲ, ಸುಂದರ ಕುಳಾಯಿ , ಪವನ್, ರಾಜೇಶ್ ಮೊದಲಾದ ಯುವಕರ ತಂಡ ಭಾಗವಹಿಸಿತ್ತು. ಗೇರುಕಟ್ಟೆ ಬಿಜೆಪಿ ಯುವ ನಾಯಕ ಕರುಣಾಕರ ಶೆಟ್ಟಿ ಇವರು ಪಿಕ್ ಅಪ್ ವಾಹನವನ್ನು ನೀಡಿ ಸಹಕರಿಸಿದ್ದಾರೆ.

Leave a Comment

error: Content is protected !!