July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಗೇರುಕಟ್ಟೆ : ಕಳಿಯ, ನ್ಯಾಯತರ್ಪು ಪ್ರದೇಶದಲ್ಲಿ ಏರ್ ಟೆಲ್ ನೆಟ್ವರ್ಕ್ ಸಮಸ್ಯೆ

ಬೆಳ್ತಂಗಡಿ : ಗೇರುಕಟ್ಟೆ, ನಾಳದ ಪರಿಸರದಲ್ಲಿ ಏರ್ ಟೆಲ್ ಕಂಪನಿಯ ನೆಟ್ವರ್ಕ್ ಸಮಸ್ಯೆಯಿಂದ ಸಾವಿರಾರು ಗ್ರಾಹಕರು ಕಂಗಲಾಗಿದ್ದಾರೆ.


ನಾಳದಲ್ಲಿ ಬಿ.ಎಸ್.ಎನ್.ಎಲ್. ಗೇರುಕಟ್ಟೆಯಲ್ಲಿ ಏರ್ ಟೆಲ್ ಟವರ್ ಗಳು ಜನರಿಗೆ ಲಭ್ಯವಿದ್ದರೂ, ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬ ಗಾದೆ ಮಾತಿನಂತೆ ಆಗಿದೆ. ನಾಳದಲ್ಲಿ ಮತ್ತು ಗೇರುಕಟ್ಟೆಯ ಟವರ್ ಗಳಲ್ಲಿ ಬಿ.ಎಸ್.ಎನ್.ಎಲ್ ಟವರ್ ನಲ್ಲಿ ಏರ್ ಟೆಲ್ ಮತ್ತು ಇನ್ನೆರಡು ಕಂಪನಿಯವರು ಸೇರಿಸಿಕೊಂಡರೂ ಗ್ರಾಹಕರಿಗೆ ಪ್ರಯೋಜನವಿಲ್ಲ.


ಈಗಾಗಲೇ ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ, ಶಾಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸ ವರ್ಕ್ ಫ್ರಮ್ ಹೋಂ ಉದ್ಯೋಗಿಗಳಿಗೆ ಹಾಗೂ ಸರಕಾರದ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆಯುವಲ್ಲಿ ಜನರು ವಂಚಿತರಾಗಿದ್ದರೆ.


ಈ ಹಿಂದೆ ಗೇರುಕಟ್ಟೆ ಏರ್ ಟೆಲ್ ಟವರ್ ಬುಡದಲ್ಲಿ ಬೆಂಕಿ ಹೊತ್ತಿಗೊಂಡ ಸಮಯದಲ್ಲಿ ಗ್ರಾಹಕರು ರಕ್ಷಿಸಿ ಮಾನವೀಯತೆ ಮೆರೆದರು. ಸಂಸ್ಥೆಯು ಗ್ರಾಹಕರ ಸಹಾಯಕ್ಕೆ ಬರದೆ ಸತಾಯಿಸುದನ್ನು ಗ್ರಾಮಸ್ಥರು ಸಹಿಸುವುದಿಲ್ಲ. ತಕ್ಷಣ ಸರಿಯಾದ ಕ್ರಮಕೈಗೊಳಬೇಕು. ತಪ್ಪಿದಲ್ಲಿ ಪಂಚಾಯತ್ ಮೇಲೆ ಒತ್ತಡ ಹೇರಿ ಪರವಾನಿಗೆ ರದ್ದು ಪಡಿಸುವ ಕಾರ್ಯಕ್ಕೆ ಮುಂದಾಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ.

ವರದಿ: ಕೆ.ಎನ್ ಗೌಡ

Related posts

ಶಿಶಿಲ ಅಂಗನವಾಡಿ ಕೇಂದ್ರಕ್ಕೆ ಬ್ಯಾಂಕ್ ಆಫ್ ಬರೋಡದಿಂದ ಕುರ್ಚಿ ಹಾಗೂ ಮೇಜು ಕೊಡುಗೆ

Suddi Udaya

ಸೌತಡ್ಕ ಬಯಲು ಗಣಪನಿಗೆ ವಾರ್ಷಿಕ ಮೂಡಪ್ಪ ಸೇವೆಯ ಸಂಭ್ರಮ   

Suddi Udaya

ಜನಸ್ನೇಹಿ ಅಧಿಕಾರಿ ಜುಬಿನ್ ಮೊಹಾಪಾತ್ರ ದಿಢೀರ್ ವಗಾವಣೆ

Suddi Udaya

ಮದಡ್ಕದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್:ಬೆಳ್ತಂಗಡಿ ತಹಶೀಲ್ದಾ‌ರ್ ಪೃಥ್ವಿ ಸಾನಿಕಂ ನೇತೃತ್ವದ ತಂಡದಿಂದ ನೆಲಸಮ

Suddi Udaya

ಸೂಳಬೆಟ್ಟು ಹಾಲು ಉತ್ಪಾದಕ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಮೂಡಾದ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆ ಎದುರಿಸಬೇಕಾಗಿ ಬಂದಿರುವುದರಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಸಿದ್ಧರಾಮಯ್ಯ ರಿಗೆ ಯಾವುದೇ ನೈತಿಕತೆ ಇಲ್ಲ: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್

Suddi Udaya
error: Content is protected !!