ಉಜಿರೆ ವರ್ತಕರಿಂದ ಆಟೋ ಚಾಲಕ ರತ್ನಾಕರ ಗೌಡರ ಕಷ್ಟಕ್ಕೆ ಸಹಾಯ ಹಸ್ತ

Suddi Udaya

ಉಜಿರೆ: ಉಜಿರೆಯಲ್ಲಿ ರಿಕ್ಷಾ ಚಲಿಸುತ್ತಿದ್ದಾಗ ರಿಕ್ಷಾದ ಮೇಲೆ ಮರ ಬಿದ್ದು ಗಾಯಗೊಂಡಿದ್ದ ರತ್ನಾಕರ ಗೌಡರ ಕಷ್ಟಕ್ಕೆ ಉಜಿರೆ ವರ್ತಕ ಸಂಘವು ಸಹಾಯ ಹಸ್ತ ನೀಡುವ ಮೂಲಕ ಕಷ್ಟಕ್ಕೆ ಸ್ಪಂದಿಸಿದೆ.

ಉಜಿರೆ ವರ್ತಕರಿಂದ ಸಹಾಯ ಹಸ್ತ ಎಂಬ ಯೋಜನೆಯಡಿ ವರ್ತಕರೆಲ್ಲರೂ ಸೇರಿಕೊಂಡು ಸುಮಾರು 16000 ರೂಪಾಯಿ ಕಲೆಕ್ಷನ್ ಮಾಡಿ ಆಟೋರಾಜ ರಿಕ್ಷಾ ಚಾಲಕ ರತ್ನಾಕರವರಿಗೆ ನೀಡಿದರು.

ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷರಾದ ಅರವಿಂದ ಕಾರಂತ್, ಜೊತೆ ಕಾರ್ಯದರ್ಶಿ ಪ್ರಸಾದ್ ರಮ್ಯ ಫ್ಯಾನ್ಸಿ, ಉಪಾಧ್ಯಕ್ಷರುಗಳಾದ ಹುಕುಂರಾಮ್ ಪಟೇಲ್ ಶಾರದಾ ಶೋರೂಂ ,ರವಿಕುಮಾರ್ ಬರೆಮೇಲು ,ಪ್ರಭಾಕರ್ ಮಹಾವೀರ ,ಪ್ರವೀಣ್ ಹಳ್ಳಿಮನೆ, ಸದಸ್ಯರಾದ ಜಯಂತ್ ನಮನ್ ಬೇಕರಿ, ರಿಚರ್ಡ್ ರಾಂಬೋ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!