23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್.ಡಿ.ಎಂ ಪ.ಪೂ‌ ಕಾಲೇಜಿನ‌ ಕನ್ನಡ ಸಂಘ ಉದ್ಘಾಟನೆ

ಬೆಳ್ತಂಗಡಿ: ಕನ್ನಡ ಸಂಘದ ಚಟುವಟಿಕೆ ಉದ್ಘಾಟನಾ ಸಮಾರಂಭಕ್ಕೆ ಮಾತ್ರ ಸೀಮಿತವಾಗದೆ ಇಡೀ ವರ್ಷ ಕವಿಗೋಷ್ಠಿ, ಚಿಂತನ ಮಂಥನ, ಕವಿ ವಿಮರ್ಷೆ, ಭಿತ್ರಿ ಪತ್ರ ರಚನೆ, ವ್ಯಕ್ತಿ ಆಧರಿತ ಉಪನ್ಯಾಸ ಮಾಲಿಕೆ ಮುಂತಾದ ಯೋಜನೆಗಳೊಂದಿಗೆ ನಡೆದು ವರ್ಷಾಂತ್ಯಕ್ಕೆ ‘ವಿದ್ಯಾರ್ಥಿ ಸಮ್ಮೇಳನ’ ರೀತಿಯಲ್ಲಿ ಸಮಾರೋಪಗೊಳ್ಳುವಂತಾಗಬೇಕು ಎಂದು ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ, ಪತ್ರಕರ್ತ ಅಚ್ಚು ಮುಂಡಾಜೆ ಅಭಿಪ್ರಾಯಪಟ್ಟರು.

ಉಜಿರೆ ಎಸ್ ಡಿ ಎಂ ಪ.ಪೂ ಕಾಲೇಜಿನಲ್ಲಿ ಜು.10 ರಂದು ನಡೆದ ಕನ್ನಡ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ವಿಚಾರಗಳನ್ನೇ ಸಂವೇದನಾ ಶೀಲ ಮನೋಭಾವದಿಂದ ಕಂಡು ಲೇಖನ, ಕವನಗಳ ಮೂಲಕ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವಂತಾಬೇಕು. ಪದಗಳ ಸಂಗ್ರಹಕ್ಕಾಗಿ ಓದುವ ಹವ್ಯಾಸ ಬಹುಮುಖ್ಯ. ಇಂಗ್ಲೀಷ್ ನಲ್ಲಿ ಕಲಿತರೆ ಮಾತ್ರ ಉನ್ನತ ಅವಕಾಶ ಎಂಬ ಮೊದಲಿಸುವಿಕೆ ತೊಲಗಿಸಿ ಕನ್ನಡಕ್ಕೂ ಭವಿಷ್ಯವಿದೆ ಎಂದು ತಮ್ಮ ಬರಹ, ವಿಮರ್ಷೆ, ಕವನ, ಸಾಹಿತ್ಯ‌ ರಚನೆ‍ಯ ಮೂಲಕ ತೋರಿಸಿಕೊಡಬಹುದು ಎಂದರು. ಭಾಷಣದ ಕೊನೆಗೆ ಅವರು ಸ್ವರಚಿತ ಕವನ ವಾಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಮಾತನಾಡಿ, ಇಂತಹಾ ಸಂಘಗಳಿಂದ ವಿದ್ಯಾರ್ಥಿಗಳಲ್ಲಿ ವಿಚಾರ ಆಸಕ್ತಿ ಹಾಗೂ ಪ್ರತಿಭೆ ಹೊರಬರಲು ಕಾರಣವಾಗುತ್ತದೆ. ಇದೂ ಅಲ್ಲದೆ ವರ್ಷ ಸ್ಪರ್ಧೆ, ಭಿತ್ತಿ‌ಪತ್ರಿಕೆ ‌ಮೊದಲಾದವುಗಳ ಮೂಲಕ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತೇವೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ‌ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಾಜೇಶ್ ಬಿ ಉಪಸ್ಥಿತರಿದ್ದರು.
ಹಸೀನಾ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಸಂಕೇತ್ ಸ್ವಾಗತಿಸಿದರು. ಕುಶ ಅತಿಥಿ ಪರಿಚಯ ಮಾಡಿದರು. ಸಾಕ್ಷಿ ನಿರೂಪಿಸಿದರು. ತೇಜನ್ ವಂದಿಸಿದರು.

Related posts

ಯುವ ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಅಭಿನಂದನ್ ಹರೀಶ್ ಕುಮಾರ್ ಆಯ್ಕೆ

Suddi Udaya

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಸ್ಪರ್ಧಿಸುವ ಅಪೇಕ್ಷೆ: ಪತ್ರಿಕಾಗೋಷ್ಠಿ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ನೆರಿಯ ಒಂಟಿ ಸಲಗ ಕಾರಿನ ಮೇಲೆ ದಾಳಿ ಪ್ರಕರಣ: ಇಬ್ಬರಿಗೆ ಗಾಯ ಐದು ಮಂದಿ ಪ್ರಾಣಾಪಾಯದಿಂದ ಪಾರು

Suddi Udaya

ಶಿಬರಾಜೆ ಕಲ್ಲೇರಿಮಾರು ನಿವಾಸಿ ಲಕ್ಷ್ಮಣ ಗೌಡ ನಿಧನ

Suddi Udaya

ನ.10 ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರೆಖ್ಯದಲ್ಲಿ ಮೊಳಗಲಿದೆ ಹಿಂದುತ್ವದ ಘರ್ಜನೆ

Suddi Udaya
error: Content is protected !!