ವಾಣಿ ಕಾಲೇಜ್ ಎನ್ ಎಸ್ ಎಸ್ ವಿದ್ಯಾರ್ಥಿ ಗಳಿಗೆ ತರಬೇತಿ

Suddi Udaya

ಬೆಳ್ತಂಗಡಿ :ವಾಣಿ ಕಾಲೇಜುಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ಜುಲೈ 12 ರಂದು ವಾಣಿ ಕಾಲೇಜಿನಲ್ಲಿ ನಡೆಯಿತು.
ದೂರ ದೃಷ್ಟಿಕೋನದಿಂದ ಮಾದರಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದೇ ನಾಯಕನ ಗುರಿಯಾಗಿರುತ್ತದೆ ಎಂದು ಜೆಸಿಐ ಭಾರತದ ಪ್ರಾವಿಷನಲ್ ನ್ಯಾಷನಲ್ ಟ್ರೈನರ್ ದೀಪಕ್ ರಾಜ್ ಹೇಳಿದರು.
ಅವರು ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳಿಗೆ ನಾಯಕತ್ವದ ಕುರಿತು ತರಬೇತಿಯನ್ನು ನೀಡುವುದರೊಂದಿಗೆ ನಾಯಕತ್ವದ ವಿವಿಧ ಆಯಾಮಗಳನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶಂಕರ್ ರಾವ್, ಸಹ ಕಾರ್ಯಕ್ರಮ ಅಧಿಕಾರಿ ಶ್ರೀಮತಿ ದೀಕ್ಷಾ, ಘಟಕ ನಾಯಕ ಅಶ್ವಥ್ ಹಾಗೂ ನಾಯಕಿ ಅನುಕ್ಷಾ ಉಪಸಿತರಿದ್ದರು.
ಕುಮಾರಿ ಶಿವಾನಿ ತರಬೇತಿದಾರರನ್ನು ಪರಿಚಯಿಸಿದರು. ಕುಮಾರಿ ಅನನ್ಯ ಕಾರ್ಯಕ್ರಮ ನಿರ್ವಹಿಸಿದರು.

Leave a Comment

error: Content is protected !!