ಚಾರ್ಮಾಡಿ: ಆಡಿಮಾರು ಇಂದಿರಾ ಮೋಹನ್ ಮನೆಗೆ ಬಿದ್ದ ಬೃಹತ್ ಮರ:ಶೌರ್ಯ ಘಟಕದ ಸ್ವಯಂ ಸೇವಕರಿಂದ ತೆರವುಗೊಳಿಸುವ ಕಾರ್ಯ

Suddi Udaya

ಬೆಳ್ತಂಗಡಿ:,ನಿನ್ನೆ ರಾತ್ರಿ ವೇಳೆ ತೀವ್ರ ಗಾಳಿ ಮಳೆಗೆ ಚಾರ್ಮಾಡಿ ಗ್ರಾಮದ ಆಡಿಮಾರು ಇಂದಿರಾ ಮೋಹನ್ ಇವರ ಮನೆಗೆ ಮಧ್ಯರಾತ್ರಿ 2.15ಕ್ಕೆ ಬೃಹತ್ ಮರ ಬಿದ್ದಿದ್ದು ಜು.14ರಂದು ಬೆಳಗ್ಗೆ 6ಗಂಟೆಗೆ ನೆರಿಯ ತುರ್ತು ಸ್ವಂದನ ಘಟಕದ ಸದಸ್ಯರಾದ ನಾಗೇಶ್ ಬಿ ಇವರಿಗೆ ಈ ವಿಚಾರ ಸ್ಥಳೀಯ ಸದಸ್ಯರ ಮೂಲಕ ತಿಳಿದು, ನೆರಿಯ, ಅರಸಿನಮಕ್ಕಿ ಉಜಿರೆ ಬೆಳಾಲು ಶೌರ್ಯ ಘಟಕದ ಸ್ವಯಂ ಸೇವಕರು ಸ್ಥಳಕ್ಕೆ ತೆರಳಿ ಮರಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದರು.

ಬಳಿಕ ಅರಣ್ಯಧಿಕಾರಿ ನಾಗೇಶ್,ಗೋಪಾಲ್,ರವಿ ಸ್ಥಳಕ್ಕೆ ಕರೆಸಿಕೊಂಡು ಅವರೊಂದಿಗೆ ಚರ್ಚಿಸಿ ಮನೆಗೆ ಬಿದ್ದ ಮರ ತೆರವು ಗೊಳಿಸಲಾಯಿತು ಹಾಗೂ ಚಾರ್ಮಾಡಿ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಮನೆಗೆ ಸಿಮೆಂಟ್ ಶೀಟ್ ಹಾಗೂ ಸಿಮೆಂಟ್ ಕಂಬ ಒದಗಿಸಿ ಕೊಟ್ಟರು ಅದನ್ನು ತುರ್ತು ಸ್ವಂದನ ತಂಡ ತಾತ್ಕಾಲಿಕ ಮನೆ ರಚನೆ ಮಾಡಿ ವಾಸ್ತವಕ್ಕೆ ಅನುಕೂಲ ಮಾಡಿ ಕೊಟ್ಟಿರುತ್ತಾರೆ.
ಈ ದಿನದ ಕಾರ್ಯಾಚರಣೆಯಲ್ಲಿ ತುರ್ತು ಸ್ಪಂದನಾ ತಂಡದ ಸ್ವಯಂ ಸೇವಕರಾದ ನೆರಿಯ ಘಟಕದ ಸ್ವಯಂ ಸೇವಕರಾದ ನಾಗೇಶ್ ಬಿ, ಸತೀಶ್ ಕೆ, ಅರಸೀನಮಕ್ಕಿ ಘಟಕದ ಅವಿನಾಶ್ ಭೀಡೆ, ಉಜಿರೆ ಘಟಕದ ಸ್ವಯಂ ಸೇವಕರಾದ ಸಚ್ಚಿನ್ ಭೀಡೆ, ಸಂದೇಶ್, ರವೀಂದ್ರ, ರಾಘವೇಂದ್ರ, ಸುಧೀರ್, ಸುಲೈಮಾನ್,ಅನಿಲ್ ಕುಮಾರ್, ಶಶಿ, ಅಶೋಕ್ ಇವರುಗಳು ತುರ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ ರವರ ಮಾರ್ಗದರ್ಶನದಲ್ಲಿ ಸಂಯೋಜಕಿ ಶ್ರೀಮತಿ ರಶ್ಮಿತಾರವರ ಕರೆಯ ಮೇರೆಗೆ ಸ್ವಯಂಸೇವಕರಾದ ಶೀನಪ್ಪ ನಾಯ್ಕ್ , ಕುಶಾಲಪ್ಪ ಗೌಡ,
ಸೋಮಶೇಖರ್ ಶಿಬಾಜೆ ,ಗಂಗಾಧರ ಬದಿಗುಡ್ಡೆ, ಅವಿನಾಶ್ ಭಿಡೆ, ಕಿರಣ್ ಸಂಕೇಶ, ರಮೇಶ ಬೈರಕಟ್ಟ ಸ್ಥಳಕ್ಕೆ ಧಾವಿಸಿ ವಯರ್ ಮ್ಯಾನ್ ಸಂತೋಷ್ ಹಾಗೂ ಉಮೇಶ್ ಇವರ ಉಪಸ್ಥಿತಿಯಲ್ಲಿ ತಂತಿಯ ಮೇಲಿದ್ದ ಬೃಹತ್ ಮರವನ್ನು ತೆರವುಗೊಳಿಸಿದರತೆರವು ಗೊಳಿಸಿದ ಮರದ ಒಂದು ಪಾರ್ಶ್ವ ಅಪಾಯಕಾರಿಯಾಗಿ ನಿಂತೇ ಇದ್ದು ಅದನ್ನು ತೆರವುಗೊಳಿಸುವಂತೆ ಹತ್ತಿರದ ಮನೆಯವರಾದ ನಾರಾಯಣ ನಾಯ್ಕರವರು ತಂಡದವರಲ್ಲಿ ವಿನಂತಿಸಿದಾಗ ಕುಶಾಲಪ್ಪ ಗೌಡರು ತಮ್ಮ ಮರಹತ್ತುವ ಕೌಶಲ್ಯವನ್ನು ಉಪಯೋಗಿಸಿ ಮರದ ತುದಿಗೆ ಹಗ್ಗ ಕಟ್ಟಿ ಮರವನ್ನು ಆ ಕಡೆ ವಿದ್ಯುತ್ ಲೈನ್ ಈ ಕಡೆ ಮನೆಯ ನಡುವೆ ಸುರಕ್ಷಿತವಾಗಿ ಕತ್ತರಿಸಿ ಹಾಕಲಾಯಿತು.
ವರದಿ. : ಸುಮಿತ್ರ ಸಂಯೋಜಕರು ನೆರಿಯ ಘಟಕ.

Leave a Comment

error: Content is protected !!