ತುರ್ತುಕರೆಗೆ ಸ್ಪಂದಿಸಿದ ಉಜಿರೆ ಬೆಳಾಲು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು

Suddi Udaya

ಬೆಳ್ತಂಗಡಿ :ಉಜಿರೆ ಬಡೆಕೊಟ್ಟು ಮನೆಯ ನಿವಾಸಿ ಸುಶೀಲ ಎಂಬುವರಿಗೆ ಇದೀಗಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ ಟ್ರಸ್ಟ್(ರಿ) ವತಿಯಿಂದ ಮಾಸಾಸನ ನೀಡುತ್ತಿದ್ದು ಮತ್ತು ವಾತ್ಸಲ್ಯ ಮನೆ ಮಂಜೂರಾಗಿದ್ದು, ಆದರೆ ವಾತ್ಸಲ್ಯ ಮನೆಯ ಕೆಲಸಗಳನ್ನು ಮಾಡಲು ತೀವ್ರ ಮಳೆ ಇರುವುದರಿಂದ ಕೆಲಸ ಮಾಡಲು ಅನಾನುಕೂಲ ಆಗಿರುವುದರಿಂದ ತುರ್ತು ಕರೆಗೆ ಸ್ಪಂದಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ ನಿರ್ವಹಣಾ ಘಟಕ ಉಜಿರೆ ಬೆಳಾಲು ಸ್ವಯಂಸೇವಕರು ಮನೆ ಕೆಲಸ ಮಾಡಿರುತ್ತಾರೆ
ಯೋಜನಾಧಿಕಾರಿ ಸುರೇಂದ್ರಹಾಗೂ ವಲಯ ಮೇಲ್ವಿಚಾರಕರಾದ ವನಿತ ಇವರ ಮಾರ್ಗದರ್ಶನದಂತೆ, ಇದೀಗ ಹಳೆಯ ಮನೆಯ ಮೇಲ್ಚಾವಣಿಗೆ ಟರ್ಪಲ್ ಹಾಕಿ ಅವರಿಗೆ ಇರಲು ಅನುಕೂಲವಾಗುವಂತೆ ಶೌರ್ಯ ಸ್ವಯಂಸೇವಕರು. ಮಾಡಿಕೊಟ್ಟಿರುತ್ತಾರೆ ಈ ಸಂದರ್ಭದಲ್ಲಿ

ಸಂತೋಷ್ ಗೌಡ, ಸುಧೀರ್, ರಾಘವೇಂದ್ರ, ಅಶೋಕ್, ಅವಿನಾಶ್ ಬಿಡೆ ಶೌರ್ಯ ಸ್ವಯಂಸೇವಕರು ಭಾಗವಹಿಸಿದ್ದರು

Leave a Comment

error: Content is protected !!