ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಎಲ್.ಹೆಚ್. ಮಂಜುನಾಥ್

Suddi Udaya

ಬೆಳ್ತಂಗಡಿ; ಧರ್ಮಸ್ಥಳ ಬಿ. ಭುಜಬಲಿ ಇವರ ಮನೆಯಲ್ಲಿ ಗಮಕ ಶಾರದೆ ಗಮಕ ಕಲಾಶ್ರೀ ಗಂಗಮ್ಮ ಕೇಶವ ಮೂರ್ತಿ ಉಪಸ್ಥಿತಿಯಲ್ಲಿ
ನಡೆದ ‘ಮನೆಮನೆ ಗಮಕ’ ಕಾರ್ಯಕ್ರಮದಲ್ಲಿ, ಜು.21ರಂದು ನೇತ್ರಾವತಿ ಬಳಿಯ ಪ್ರಣವ್ ಸಭಾಂಗಣದಲ್ಲಿ ನಡೆಯವ ಕ.ಜಾ.ಪ ಬೆಳ್ತಂಗಡಿ ತಾಲೂಕು ಘಟಕ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ, ಚುಟುಕು ಸಾಹಿತ್ಯ ಪರಿಷತ್ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಶ್ರಾಂತ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್.ಮಂಜುನಾಥ್ ಆಮಂತ್ರಣ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕ ಗಮಕಶ್ರೀ ವಿನಾಯಕ ಶಿವಮೊಗ್ಗ, ದ.ಕ.ಜಿಲ್ಲಾ ಗಮಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಧೂರು ಮೋಹನ ಕಲ್ಲೂರಾಯ, ಧರ್ಮಸ್ಥಳ ಗ್ರಾಮ ಪಂಚಾಯತು ಉಪಾಧ್ಯಕ್ಷ ಶ್ರೀನಿವಾಸ ರಾವ್, ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕದ ಗೌರವಾಧ್ಯಕ್ಷ ಬಿ.ಭುಜಬಲಿ ಧರ್ಮಸ್ಥಳ, ಅಧ್ಯಕ್ಷ ವಿಜಯ ಕುಮಾರ್ ಜೈನ್,ಕೆ.ರತ್ನವರ್ಮ ಜೈನ್,ಬಿ.ಜನಾರ್ಧನ ತೋಳ್ಪಾಡಿತ್ತಾಯ, ಆಮಂತ್ರಣ ಅಳದಂಗಡಿ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಸಚಿನ್, ಸದಸ್ಯರಾದ ಅರುಣ್ ಜೈನ್ ಅಳದಂಗಡಿ ಹಾಗೂ ಕ.ಸಾಹಿತ್ಯ ಪರಿಷತ್ತಿನ ರಾಮಕೃಷ್ಣ ಭಟ್ ಬೆಳಾಲು, ಪ್ರಕಾಶ್ ಶೆಟ್ಟಿ ಧರ್ಮಸ್ಥಳ , ಮಲ್ಲಿನಾಥ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!