ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ವಿಶೇಷ ಕೌಶಲ್ಯ ತರಬೇತಿ “ಐಸ್ ಬ್ರೇಕಿಂಗ್ ಸೆಷನ್” ಕಾರ್ಯಾಗಾರ

Suddi Udaya

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ವಿಶೇಷ ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಯಿತು.

ರಾ.ಸೇ.ಯೋಜನೆಯ ಹಿರಿಯ ಸ್ವಯಂ ಸೇವಕರಾದ ಸಾಯಿ ಕಿರಣ್ , ಭರತ್.ಕೆ .ರಾವ್ ಹಾಗೂ ಭರತ್ ಕುಲಾಲ್ ಅವರು ವಿವಿಧ ಚಟುವಟಿಕೆ ಆಧಾರಿತ ವಿಶೇಷ ಕೌಶಲ್ಯ ತರಬೇತಿ ” ಐಸ್ ಬ್ರೇಕಿಂಗ್ ಸೆಷನ್ ” ಕಾರ್ಯಾಗಾರ ನಡೆಸಿದರು. ಮಾನವ ಸಂಪನ್ಮೂಲ ಬಳಕೆ ಹಾಗೂ ಕೌಶಲ್ಯ ಆಧಾರಿತ ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ನಡೆಸಿದರು.

ರಾ. ಸೇ. ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು. ಹಿರಿಯ ಸ್ವಯಂ ಸೇವಕರಾದ ಸುದರ್ಶನ್ ನಾಯಕ್ , ಸಮರ್ಥ ಪಾಟೀಲ್ ಹಾಗೂ ಸಿದ್ದಾಂತ ಜೈನ್ ಸಂಪನ್ಮೂಲ ಗೌರವಿಸಿದರು.

ಸೌಜನ್ಯ ಸ್ವಾಗತಿಸಿ , ಶ್ರೇಯಾ ವಂದಿಸಿದರು. ಹರ್ಷಿತಾ ನಿರೂಪಿಸಿದರು.

Leave a Comment

error: Content is protected !!