
ಗುರುವಾಯನಕೆರೆ: ಇಂದು ಬೆಳಗ್ಗಿನಿಂದ ನಿರಂತರ ಸುರಿದ ಮಳೆಯಿಂದಾಗಿ ಚರಂಡಿ ವ್ಯವಸ್ಥೆ ಇಲ್ಲದೆ ಗುರುವಾಯನಕೆರೆಯಿಂದ ನಾರಾವಿ ಮತ್ತು ವೇಣೂರು ಹೋಗುವ ಶಕ್ತಿನಗರದಲ್ಲಿ ರಸ್ತೆಯಲ್ಲೇ ನೀರು ಹರಿದುಹೋಗುತ್ತಿದ್ದು ಹಾಗೂ ರಸ್ತೆಯ ಹತ್ತಿರದಲ್ಲೇ ನೀರು ನಿಂತು ಕೆರೆಯಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಗಮನ ಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.











