ವಿಪರೀತ ಮಳೆಯಿಂದಾಗಿ ಕುಂಟಿನಿ ಹಮ್ಮಬ್ಬ ರವರ ಹೊಟೇಲ್ ನ ಮೇಲ್ಛಾವಣಿ ಕುಸಿತ : ಸೂಕ್ತ ಪರಿಹಾರಕ್ಕಾಗಿ ಎಸ್.ಡಿ.ಪಿಐ ಒತ್ತಾಯ

Suddi Udaya

ಬೆಳ್ತಂಗಡಿ: ವಿಪರೀತ ಮಳೆಯಿಂದಾಗಿ ಜಿಲ್ಲಾದ್ಯಂತ ಎಲ್ಲಾ ಕಡೆಗಳಲ್ಲೂ ಪ್ರಕೃತಿ ವಿಕೋಪಗಳು ನಡೆಯುತ್ತಿದ್ದು, ಲಾಯಿಲ ಗ್ರಾಮದ ಕುಂಟಿನಿ ಹಮ್ಮಬ್ಬ ರವರ ಹೊಟೇಲ್ ನ ಸೀಟು ಹಾಗೂ ಮೇಲ್ಟಾವಣಿ ಕುಸಿತಗೊಂಡಿದ್ದು ಹೊಟೇಲ್ ಹಾಗೂ ಮನೆಯು ಒಂದೆಯಾಗಿದ್ದು, ಅಪಾರ ಹಾನಿ ಉಂಟಾಗಿದೆ. ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದ ಘಟನೆ ಜು.18 ರಂದು ರಾತ್ರಿ ನಡೆದಿದೆ.

ವಿಷಯ ತಿಳಿದ ತಕ್ಷಣ ಎಸ್. ಡಿ. ಪಿ. ಐ ಲಾಯಿಲ ಗ್ರಾಮ ಪಂಚಾಯತ್ ಬೆಂಬಲಿತ ಸದಸ್ಯ ಸಲೀಂ ಕುಂಟಿನಿ ರವರು ತುರ್ತಾಗಿ ಸ್ಪಂದಿಸಿ ಸ್ಥಳಕ್ಕೆ ಗ್ರಾಮ ಲೆಕ್ಕಧಿಕಾರಿ (VA) ರನ್ನು ತಕ್ಷಣ ಸ್ಥಳಕ್ಕೆ ಕರೆತರಲಾಯಿತು. ಎಸ್. ಡಿ. ಪಿ. ಐ ಕುಂಟಿನಿ ಬೂತ್ ಅಧ್ಯಕ್ಷರು ರೌಫ್ ಕುಂಟಿನಿ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿರುತ್ತಾರೆ.

Leave a Comment

error: Content is protected !!