ಬಾರ್ಯ: ಸರಳಿಕಟ್ಟೆ ಮೆಗಿನ ಪುಯಿಲದಲ್ಲಿ ತುಂಡಾಗಿ ಬೀಳುತ್ತಿರುವ ವಿದ್ಯುತ್ ತಂತಿಗಳು: ಅನಾಹುತ ಸಂಭವಿಸುವ ಮುನ್ನ ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಬಾರ್ಯ: ಗ್ರಾಮದ ಸರಳಿಕಟ್ಟೆ ಸರಕಾರಿ ಪ್ರೌಡ ಶಾಲೆಯ ಸಮೀಪ ಖಾನ (ಮಲ್ಲಕಲ್) ಮೆಗಿನ ಪುಯಿಲದಲ್ಲಿ ಸುಮಾರು ವರ್ಷಗಳ ಹಿಂದೆ ಹಾಕಿರುವ ವಿದ್ಯುತ್ ತಂತಿಗಳು ಬಹಳಷ್ಟು ಕ್ಷೀಣಿಸಿದ್ದು, ವರ್ಷದಲ್ಲಿ ಏಳೆಂಟು ಬಾರಿ ಈ ವಿದ್ಯುತ್ ತಂತಿ ಮಾರ್ಗಕ್ಕೆ ತುಂಡಾಗಿ ಬೀಳುತ್ತಿದೆ. ಈ ಭಾಗದ ಲೈನ್ ಮ್ಯಾನ್ ದೂರು ನೀಡಿದ ತಕ್ಷಣ ಬಂದು ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಆದರೆ ಅದೆಷ್ಟು ಬಾರಿ ಇಲಾಖೆಗೆ ಮನವಿ ಮಾಡಿದರೂ ಕೂಡಾ ಈ ಪರಿಸರದಲ್ಲಿ ಹೊಸ ತಂತಿಯನ್ನು ಅಳವಡಿಸುತ್ತಿಲ್ಲ. ಈ ಹಿಂದೆ ಮೆಸ್ಕಾಂ ಇಲಾಖೆಯ ಅದಾಲತ್ ನಲ್ಲಿ ಕೂಡ ದೂರು ದಾಖಲಿಸಲ್ಪಟ್ಟಿದೆ.


ಇದೀಗ ಮತ್ತೊಮ್ಮೆ ಇದೇ ಪರಿಸರದಲ್ಲಿ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಹೋಗುವ ದಾರಿಯಲ್ಲೇ ಟ್ರಾನ್ಸ್ಫಾರ್ಮ್ ಕಂಬದಲ್ಲಿ ತಂತಿಯೊಂದು ಅದರ ಉಪಕರಣಗಳು ತುಂಡಾಗಿ ವಿದ್ಯುತ್ ತಂತಿಯು ನೇತಾಡುತ್ತಿದ್ದು, ಪ್ರಾಣಕ್ಕೆ ಕಂಟಕವಾಗಿದೆ. ವಿದ್ಯುತ್ ಕಂಬದ ಹತ್ತಿರದಲ್ಲಿ ಮನೆಗಳು ಇರುವುದರಿಂದ ಅನಾಹುತ ನಡೆಯುವ ಸಂಭವವಿದೆ. ಶೀಘ್ರದಲ್ಲಿ ದುರಸ್ತಿ ಕಾರ್ಯ ಮಾಡಿದರೆ ಅನಾಹುತ ತಪ್ಪಬಹುದು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಪ್ರಾಣ ಹಾನಿ ಆಗುವ ಮೊದಲು ಈ ಪರಿಸರದಲ್ಲಿ ಹೊಸ ತಂತಿಯನ್ನು ಅಳವಡಿಸಬೇಕಾಗಿ ವಿನಂತಿಸಿದ್ದಾರೆ.

Leave a Comment

error: Content is protected !!