ನೀರಚಿಲುಮೆ-ನಾರ್ಯ ಸಂಪರ್ಕಿಸುವ ರಸ್ತೆಯಲ್ಲಿ ನೀರು ಹರಿಯಲು ಚರಂಡಿ ವ್ಯವಸ್ಥೆಯಿಲ್ಲದೆ ಧರೆ ಕುಸಿತ, ಶೀಘ್ರ ದುರಸ್ಥಿಗೆ ಆಗ್ರಹ

Suddi Udaya

Updated on:

ಕನ್ಯಾಡಿ 2 : ನೀರಚಿಲುಮೆ ನಾರ್ಯ ಸಂಪರ್ಕಿಸುವ ರಸ್ತೆಯಲ್ಲಿ ನೀರು ಹೋಗಲು ಚರಂಡಿ ವ್ಯವಸ್ಥೆಯಿಲ್ಲದೆ ಧರೆಯ ಕುಸಿತಕ್ಕೆ ಕಾರಣವಾದ ಘಟನೆ ನಡೆದಿದೆ.

ಹಿಂದೆ ಮಳೆ ನೀರು ಹರಿದು ಹೋಗಲು ಜಾಗವಿದ್ದು, ಹೊಸದಾಗಿ ಬೋರ್ ವೆಲ್ ತೆಗೆದ ನಂತರ ಅದರ ಮಣ್ಣು ತುಂಬಿ ಕೊಂಡಿದ್ದು ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇರುವುದಿಲ್ಲ. ಆದರಿಂದ ಮಳೆಯ ನೀರು ಎರಡು ಬದಿಯ ಧರೆಯ ಕುಸಿತಕ್ಕೆ ಕಾರಣವಾಗಿದೆ.

ಈ ಬಗ್ಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಸ್ಥಳಿಯರು ಇಗಾಗಲೇ ತಿಳಿಸಿದ್ದು ಶೀಘ್ರ ದುರಸ್ತಿಗೆ ಒತ್ತಾಯಿಸಿದ್ದಾರೆ.

Leave a Comment

error: Content is protected !!