24.6 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ಸುಬ್ರಹ್ಮಣ್ಯದಲ್ಲಿದ್ದ ನಿರ್ಗತಿಕ ಬೆಂಗಳೂರಿನ ಜನ ಸ್ನೇಹಿ ಕೇಂದ್ರಕ್ಕೆ

ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮಾನಸಿಕ ಅಸ್ವಸ್ಥ ರಂತೆ ತಿರುಗಾಡುತಿದ್ದ ವ್ಯಕ್ತಿ ಇಂಟರ್ನ್ಯಾಷನಲ್ ಸೀನಿಯರ್ ಚೇಂಬರ್ ಮತ್ತಿತರರು ಸೇರಿ ಬೆಂಗಳೂರಿನ ಜನ ಸ್ನೇಹಿ ಆಶ್ರಮಕ್ಕೆ ಕಳುಹಿಸಿದ ಘಟನೆ ಜು.23 ರಂದು ನಡೆದಿದೆ.

ಸುಮಾರು ದಿನಗಳಿಂದ ಸುಬ್ರಹ್ಮಣ್ಯದ ಆಸು ಪಾಸಿನಲ್ಲಿ ತಿರುಗಾಡುತ್ತಾ ಮತ್ತು ರೋಡ್ ಬದಿಯಲ್ಲಿ ಮಲಗುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಇಂಟರ್ನ್ಯಾಷನಲ್ ಸೀನಿಯರ್ ಚೇಂಬರ್ ನ ಅಧ್ಯಕ್ಷರಾದ ಡಾ. ರವಿ ಕಕ್ಕೆ ಪದವು ಅವರಿಗೆ ತಿಳಿಸಿದರು .

ಡಾ| ರವಿ ಕಕ್ಕೆಪದವುರವರು ವಿಚಾರಿಸಿದಾಗ ನನ್ನ ಊರು ಕೊಯಮತ್ತೂರ್ ನನ್ನನ್ನು ನನ್ನ ತಾಯಿ ಬಿಟ್ಟು ಹೋಗಿದ್ದಾರೆ ಇಂದು ತಿಳಿಸಿದರು.

ಇದನ್ನು ಮನಗಂಡ ರವಿಕಕ್ಕೆಪದವು, ಶಿವ ಭಟ್, ರಾಧಾಕೃಷ್ಣ, ಹರೀಶ್‌ ಇಂಜಾಡಿ, ಗ್ರಾಮ ಪಂಚಾಯತ್ ಮತ್ತಿತರರು ಸೇರಿ ಈ ವ್ಯವಸ್ಥೆ ಮಾಡಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆ್ಯಂಬುಲೆನ್ಸ್ ಮೂಲಕ ಕಳುಹಿಸಿ ಕೊಡಲಾಯಿತು . ಈ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಎ.ಸಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಠಾಣೆಯ ಸಹಾಯ ಪಡೆಯಲಾಯಿತು.

ಶಿವ ಭಟ್ ರವರು ಕೊಯಮುತ್ತೂರಿನ ಸ್ಥಳಿಯ ಆಶ್ರಮಕ್ಕೆ ವಿಷಯವನ್ನು ತಿಳಿಸಿದಾಗ ಶಿವ ಭಟ್ ರವರು ಅವರ ಫೋನ್ ನಂಬರ್ ಗಳನ್ನು ತೆಗೆದುಕೊಂಡು ಅವರ ಮನೆ ಅವರಿಗೆ ತಿಳಿಸಿದಾಗ ನಾವು ಅವರನ್ನು ತುಂಬಾ ಹುಡುಕಾಡುತ್ತಿದ್ದೆವು ಎಂದು ತಿಳಿಸಿದರು . ನಾವು ಇವತ್ತೇ ಅವನನ್ನು ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು. ಆಗ ಜನಸ್ನೇಹಿ ಆಶ್ರಮಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು .

ಅವರ ತಾಯಿ ನನ್ನ ಮಗನನ್ನು ಹುಡುಕಿಕೊಟ್ಟದ್ದಕ್ಕಾಗಿ ರವಿಕಕ್ಕೆಪದವು, ಶಿವ ಭಟ್, ರಾಧಾಕೃಷ್ಣ, ಹರೀಶ್‌ ಇಂಜಾಡಿ, ಮತ್ತಿತರರಿಗೆ ಧನ್ಯವಾದವನ್ನು ತಿಳಿಸಿದರು.

Related posts

ನಾಳ ಶ್ರೀ ದೇವಸ್ಥಾನದ ರಥಬೀದಿಯಲ್ಲಿ ಶನೀಶ್ವರ ಮಹಾತ್ಮೆ ಬಯಲಾಟ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗಾಲಿ ಕುರ್ಚಿ ಹಸ್ತಾಂತರ

Suddi Udaya

ಮಚ್ಚಿನ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Suddi Udaya

ಫೆ.26 ಬಳಂಜದಲ್ಲಿ ಗುರುಪೂಜೆ, ನೂತನ ಅಡುಗೆ ಕೊಠಡಿ ಉದ್ಘಾಟನೆ- ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಡಂತ್ಯಾರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದಿಂದ ಬಿಎಂಎಸ್ ಸ್ಥಾಪನೆ ದಿನಾಚರಣೆ

Suddi Udaya

ಓಡಿಲ್ನಾಳ: ಅಪಾಯಕಾರಿ ತಿರುವಿಗೆ ತುರ್ತಾಗಿ ತಡಬೇಲಿ ಹಾಕುವಂತೆ ಗ್ರಾಮಸ್ಥರ ಒತ್ತಾಯ

Suddi Udaya
error: Content is protected !!