30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯುವಶಕ್ತಿ ಫ್ರೆಂಡ್ಸ್ ನ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ನಾಲ್ಕೂರು:ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಇದರ ವತಿಯಿಂದ ಆ. 25 ರಂದು ನಡೆಯಲಿರುವ 2 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಳಂಜ‌ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ ಬಿಡುಗಡೆಗೊಳಿಸಿ ಕಾರ್ಯಕ್ರಮವು ಯಾವುದೇ ಅಡೆ ತಡೆಗಳು ಬಾರದೆ ಸುಸೂತ್ರವಾಗಿ ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮಾಜಿ ಅಧ್ಯಕ್ಷರುಗಳಾದ ಪ್ರವೀಣ್ ಕುಮಾರ್ ಹೆಚ್.ಎಸ್,ದಿನೇಶ್ ಅಂತರ,ಯುವ ಉದ್ಯಮಿ ಪ್ರವೀಣ್ ಪೂಜಾರಿ ಲಾಂತ್ಯಾರು, ಬ್ಯಾಂಕ್ ಉದ್ಯೋಗಿ ಜಗದೀಶ್ ಬಳ್ಳಿದಡ್ಡ,ಯುವಶಕ್ತಿ ತಂಡದ ಪದಾಧಿಕಾರಿಗಳಾದ ಸಂತೋಷ್ ಪಿ ಕೋಟ್ಯಾನ್,ಯೋಗೀಶ್ ಆರ್ ಯೈಕುರಿ,ಯತೀಶ್ ವೈ.ಎಲ್,ಕರುಣಾಕರ ಹೆಗ್ಡೆ ಬೊಕ್ಕಸ,ರಂಜಿತ್ ಪೂಜಾರಿ, ಪ್ರವೀಣ್ ಡಿ ಕೋಟ್ಯಾನ್, ಶರತ್ ಅಂಚನ್ ಉಪಸ್ಥಿತರಿದ್ದರು.

ಸಂಪತ್ ಕೋಟ್ಯಾನ್, ಚಂದ್ರಹಾಸ್ ಬಳಂಜ,ಮಹೇಶ್ ಕುಲಾಲ್, ಸುದೀರ್ ಮಜಲೋಡಿ, ಜಯಪ್ರಸಾದ್ ದರ್ಖಾಸ್ ,ಪ್ರಶಾಂತ್ ಕೋಟ್ಯಾನ್, ಜಗದೀಶ್ ಕೋಟ್ಯಾನ್, ದಿನೇಶ್ ನಿಟ್ಟಡ್ಕ, ರಕ್ಷಿತ್ ಬಗ್ಯೋಟ್ಟು, ಪ್ರಶಾಂತ್ ಮಜಲೋಡಿ, ಸುಧೀಶ್ ಪೂಜಾರಿ,
ಸಂತೋಷ್ ಕುಮಾರ್, ವಿಜಯ ಪೂಜಾರಿ, ಪ್ರಣಾಮ್ ಶೆಟ್ಟಿ, ಕಿರಣ್ ಕುಮಾರ್, ಸಾಯಿ, ಪ್ರಥಮ್ ಸಹಕರಿಸಿದರು.

ಆಗಷ್ಟ್ 25 ರಂದು ಬೆಳಿಗ್ಗೆಯಿಂದ ವಿವಿಧ ಆಟೋಟ ಸ್ಪರ್ದೆಗಳು, 1-6 ವಯಸ್ಸಿನ ಮಕ್ಕಳಿಗೆ ಬಾಲಕೃಷ್ಣ, ಮುದ್ದುಕೃಷ್ಣ ಸ್ಪರ್ದೆ,ವಾಲಿಬಾಲ್, ತ್ರೋಬಾಲ್,ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.

Related posts

ಕೌಟುಂಬಿಕ ವಿಚಾರದಲ್ಲಿ ಕಲಹ: ಮಾವನಿಗೆ ಸ್ಕೂಟರ್ ನಲ್ಲಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿದ ಅಳಿಯ: ಮಿತ್ತಬಾಗಿಲು ಕಂಬಳದಡ್ಡದಲ್ಲಿ ನಡೆದ ಘಟನೆ

Suddi Udaya

ಬಣಕಲ್ ಸಾಯಿಕೃಷ್ಣ ಹೆಲ್ತ್ ಸೆಂಟರ್ ನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣೆ ಶಿಬಿರ

Suddi Udaya

ಬೆಳ್ತಂಗಡಿಯಲ್ಲಿ ಐ ಕೇರ್ ಒಪ್ಟಿಕಲ್ಸ್ ಶುಭಾರಂಭ

Suddi Udaya

ಬೆಳ್ತಂಗಡಿ: ದಲಿತ ಮುಖಂಡ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ, ಚಂದು ಎಲ್. ನಿಧನ

Suddi Udaya

ದೇವಿ ಭಗವತಿ ಅಮ್ಮನವರ ಬ್ರಹ್ಮಕಲಶೋತ್ಸವತಂತ್ರಿಗಳಿಗೆ ಪೂರ್ಣಕುಂಭದ ಸ್ವಾಗತ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯಿಂದ ತಾಲೂಕಿನ ಸಾಧಕ ಮಹಿಳೆಯರಿಗೆ ಪಂಚರತ್ನ ಪ್ರಶಸ್ತಿ ಪುರಸ್ಕಾರ

Suddi Udaya
error: Content is protected !!