ಭಾರೀ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ನದಿ: ಪಜಿರಡ್ಕದಲ್ಲಿ ಗಂಗಾಪೂಜೆ

Suddi Udaya

ಬೆಳ್ತಂಗಡಿ: ತಾಲೂಕಿನಲ್ಲಿ ನಿನ್ನೆ ರಾತ್ರಿಯಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತಿದ್ದು ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ.

ಭಾರೀ ಮಳೆಯಿಂದ ನೇತ್ರಾವತಿ ಮೃತ್ಯುಂಜಯ ನದಿ ಉಕ್ಕಿ ಹರಿಯುತಿದ್ದು ನೀರು ಪಜಿರಡ್ಕ ದೇವಸ್ಥಾನದ ಅವರಣಕ್ಕೆ ನುಗ್ಗುತ್ತಿದೆ, ಯಾವುದೇ ರೀತಿಯ ಪ್ರಕೃತಿ ವಿಕೋಪ ನೀರಿನಿಂದ ಅಪಾಯ ಎಲ್ಲಿಯೂ ಸಂಭವಿಸದಿರಲಿ ಎಂದು ದೇವಸ್ಥಾನದಲ್ಲಿ ಗಂಗಾ ಪೂಜೆ ನೆರವೇರಿಸಲಾಗಿದೆ.

Leave a Comment

error: Content is protected !!