July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕರ್ನಾಟಕ ರಾಜ್ಯ ಟೈಲರ್ ಸಂಘದ ಬೆಳ್ತಂಗಡಿ ಕ್ಷೇತ್ರ ಸಮಿತಿಯ ವತಿಯಿಂದ ಆಟಿಡೊಂಜಿ ದಿನ

ಬೆಳ್ತಂಗಡಿ : ಕರ್ನಾಟಕ ರಾಜ್ಯ ಟ್ಯೆಲರ್ ಸಂಘದ ಬೆಳ್ತಂಗಡಿ ಕ್ಷೇತ್ರ ಸಮಿತಿಯ ವತಿಯಿಂದ ನಡೆದ ಆಟಿಡೊಂಜಿ ದಿನ ವಿಶೇಷ ಉಪನ್ಯಾಸ ನೀಡಿದ ಡಾ.ರವೀಶ್ ಪಡುಮಲೆಯವರು ಹಿಂದಿನ ನಮ್ಮ ಹಿರಿಯ ಕಷ್ಟದ ಬದುಕನ್ನು ಇಂದು ನಾವು ಆಟಿಡೊಂಜಿ ದಿನದ ಮೂಲಕ ನೆನಪು ಮಾಡಿಕೊಳ್ಳುತ್ತಿದ್ದೇವೆ. ತುಳುನಾಡಿನ ಆಚಾರ ವಿಚಾರಗಳ ಜೊತೆಗೆ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಮ್ಮ ವೃತ್ತಿ ಜೀವನದ ಗೌರವದೊಂದಿಗೆ ನಮ್ಮ ಕಿರಿಯರಿಗೆ ನಾಡಿನ ಆಚಾರ-ವಿಚಾರಗಳನ್ನು ಮನವರಿಕೆ ಮಾಡುವುದು, ಸ್ವಸ್ಥ ಸಮಾಜದ ನಿರ್ಮಾಣ ಮತ್ತು ಉಳಿಸುವುದು ನಮ್ಮ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಡಾ.ರವೀಶ್ ಪಡುಮಲೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ವೇದಾವತಿ , ಜಯಂತ್ ಉರ್ಲಾಂಡಿ, ಶಾಂಭವಿ ಪಿ ಬಂಗೇರ, ಜಯಲಾಕ್ಷ, ಕುಶಾಲಪ್ಪ ಗೌಡ, ನಾಗೇಶ್ ಉಜಿರೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಟಿ ತಿಂಡಿ ತಿನಿಸುಗಳೊಂದಿಗೆ ಟೈಲರ್ಸ್ ವೃತ್ತಿ ಭಾಂದವರು ಸಹ ಭೋಜನದಲ್ಲಿ ಭಾಗಿಯಾದರು.

Related posts

ಕಡಿರುದ್ಯಾವರದಲ್ಲಿ ಒಂಟಿ ಸಲಗ ಹಾವಳಿ

Suddi Udaya

ನಡ: ಪದ್ಮನಾಭ ಗೌಡರ ಕೈಬೆರಳು ಕಬ್ಬು ಜ್ಯೂಸ್ ಯಂತ್ರಕ್ಕೆ ಸಿಲುಕಿ ನಜ್ಜುಗುಜ್ಜು

Suddi Udaya

ಸೋಣಂದೂರು: ಅಪರಿಚಿತ ವ್ಯಕ್ತಿ ಶವ ಪತ್ತೆ

Suddi Udaya

ಅಂಡೆತಡ್ಕ : ಕರಾಯ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಆಮಂತ್ರಣ ಮುದ್ದು ಕೃಷ್ಣ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ

Suddi Udaya

ಗುರುವಾಯನಕೆರೆ – ಉಪ್ಪಿನಂಗಡಿ ಮುಖ್ಯ ರಸ್ತೆಯ ಕುಲಾಲ ಮಂದಿರದ ಬಳಿ ಬೃಹತ್ ಮರಗಳು ರಸ್ತೆಯ ಅಂಚಿನಲ್ಲಿದ್ದು ತೆರವುಗೊಳಿಸುವಂತೆ ಹರೀಶ್ ಕಾರಿಂಜ ಒತ್ತಾಯ

Suddi Udaya
error: Content is protected !!