ಕೊಯ್ಯೂರು ಮಾಧವ ಶೆಟ್ಟಿಗಾರ್ಮನೆ ಬಳಿ ಗುಡ್ಡ ಕುಸಿತಸ್ಥಳಕ್ಕೆ ಗ್ರಾ.ಪಂ ಕಾಯ೯ದಶಿ೯ ಪರಮೇಶ್ವರ್ ಭೇಟಿ – ಪರಿಶೀಲನೆ

Suddi Udaya

ಕೊಯ್ಯೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಜಡಿಮಳೆಗೆ ಇಲ್ಲಿಯ ಕೊಯ್ಯೂರು ಗ್ರಾಮದ ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ದಿ| ಅಚ್ಚುತ ಶೆಟ್ಟಿಗಾರ್ ಅವರ ಪುತ್ರ ಮಾಧವ ಶೆಟ್ಟಿಗಾರ್ ಅವರ ಮನೆ ಬಳಿಕ ಗುಡ್ಡ ಕುಸಿತಕ್ಕೊಳಗಾಗಿದ್ದು, ಸ್ಥಳಕ್ಕೆ ಕೊಯ್ಯೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆಯ ಸಮೀಪದ ಗುಡ್ಡ ಕುಸಿತಕ್ಕೊಳಗಾಗಿ ಮಣ್ಣು ಮನೆಯ ಸ್ಟೇಪ್‌ನ ಮೆಟ್ಟಿಲು ತನಕ ಬಂದಿದೆ. ಅವರು ಮನೆ ನಿರ್ಮಿಸಿ ಕೇವಲ ಎರಡು ತಿಂಗಳಷ್ಟೇ ಕಳೆದಿದೆ. ಜಡಿಮಳೆಗೆ ಗುಡ್ಡ ಕುಸಿತಕ್ಕೋಳಗಾಗುತ್ತಿದ್ದು, ಮನೆಗೆ ಅಪಾಯ ತರುವ ಸಾಧ್ಯತೆ ಕಂಡು ಬಂದಿದೆ.

Leave a Comment

error: Content is protected !!