ಕೊಯ್ಯೂರು: ಆದೂರ್ ಪೆರಾಲ್ ಉತ್ಸಾಹಿ ಸ್ವಯಂ ಸೇವಕ ತಂಡದಿಂದ ಶ್ರಮದಾನ

Suddi Udaya

ಕೊಯ್ಯೂರು : ಉತ್ಸಾಹಿ ಸ್ವಯಂ ಸೇವಕ ತಂಡ ಆದೂರ್ ಪೆರಾಲ್ ಕೊಯ್ಯೂರು ಇದರ ಸದಸ್ಯರಿಂದ ಶ್ರಮದಾನದ ಮೂಲಕ ಭೂಕುಸಿತ ಸಂಭವಿಸಿ ತೋಡಿಗೆ ಬಿದ್ದಿರುವ ಮಣ್ಣು ಮತ್ತು ಇನ್ನಿತರ ವಸ್ತುಗಳ ತೆರವುಗೊಳಿಸುವ ಕಾರ್ಯಕ್ರಮ ನಡೆಯಿತು.


ಕೊಯ್ಯೂರು ನಾಗನೋಡಿ ಹೇಮಂತ ಗೌಡರ ಮನೆಯ ಹಿಂಭಾಗದಲ್ಲಿ ವಿಪರೀತ ಮಳೆಯಿಂದ ಭೂಕುಸಿತ ಉಂಟಾಗಿ ಮಣ್ಣು ಹಾಗೂ ಮರಗಳು ನೀರು ಹರಿಯುವ ತೋಡಿಗೆ ಬಿದ್ದು ತುಂಬಾ ಸಮಸ್ಯೆಯಗಿತ್ತು. ಈ ಸಮಸ್ಯೆಯನ್ನು ಶ್ರೀ ಕೃಷ್ಣ ಭಜನಾ ಮಂಡಳಿ ಆದೂರ್ ಪೆರಾಲ್, ಕೊಯ್ಯೂರು ಇದರ ಸಹಕಾರದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಉತ್ಸಾಹಿ ಸ್ವಯಂ ಸೇವಕರ ತಂಡದ ಸದಸ್ಯರು ಒಟ್ಟಾಗಿ ಸೇರಿ ಇಂದು ಸತತ 7 ಗಂಟೆಗಳ ಕಾಲ ಶ್ರಮದಾನದ ಮೂಲಕ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸಿ ನೀರು ಸುಗಮವಾಗಿ ಹರಿಯುವಂತೆ ಮಾಡಿ ಮುಂದಕ್ಕೆ ಆಗಬಹುದಾದ ಹೆಚ್ಚಿನ ಅಪಾಯವನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟುವಲ್ಲಿ ಯಶಸ್ವಿಯಾದರು.

Leave a Comment

error: Content is protected !!