April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆ.20: ಉಜಿರೆಯಲ್ಲಿ ಸದಸ್ಯತ್ವ ನೋಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ : ಸಮಾಲೋಚನಾ ಸಭೆ

ಉಜಿರೆ: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಆ.20 ರಂದು ಉಜಿರೆಯಲ್ಲಿ ಶಾರದಾ ಮಂಟಪದಲ್ಲಿ ಸದಸ್ಯತ್ವ ನೋಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ ನಡೆಯಲಿದ್ದು ಪೂರ್ವಸಿದ್ಧತೆಗಳ ಬಗ್ಯೆ ಸಮಾಲೋಚನಾ ಸಭೆಯು ಆ. 3ರಂದು ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.


ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಸಮಾವೇಶದ ಬಗ್ಯೆ ಸವಿವರ ಮಾಹಿತಿ ನೀಡಿ ವಿವಿಧ ಊರುಗಳಿಗೆ ವಿಭಾಗ ಸಂಘಟಕರನ್ನು ಆಯ್ಕೆ ಮಾಡಲಾಯಿತು. ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಮಡಂತ್ಯಾರು, ನಾರಾವಿ, ನಿಡ್ಲೆ, ಗುರುವಾಯನಕೆರೆ ವಲಯಗಳಿಗೆ ತಲಾ ನಾಲ್ಕು ಮಂದಿಯAತೆ ಸಂಘಟಕರನ್ನು ಆಯ್ಕೆ ಮಾಡಿ ನಿವೃತ್ತರ ಸದಸ್ಯತ್ವ ನೋಂದಣಿಗೆ ಸಹಕರಿಸುವಂತೆ ಕೋರಲಾಯಿತು.


ಸಂಘದ ಕಾರ್ಯದರ್ಶಿ ವಿಶ್ವಾಸ ರಾವ್ ವರದಿ ವಾಚಿಸಿದರು. ವಸಂತ ಸುವರ್ಣ ಪಿಂಚಣಿ ಬಗ್ಯೆ ಮಾಹಿತಿ ನೀಡಿದರು. ಕೋಶಾಧಿಕಾರಿ ಜಗನ್ನಿವಾಸ ರಾವ್ ಲೆಕ್ಕಪತ್ರದ ವಿವರ ನೀಡಿದರು.


ಸನ್ಮತ್ ಕುಮಾರ್ ನಾರಾವಿ ಸ್ವಾಗತಿಸಿದರು. ಕುಸುಮಾವತಿ ಧನ್ಯವಾದವಿತ್ತರು.

Related posts

ನಾಲ್ಕೂರು: ಪಾಲೆದಡಿ ಸಂಕಪ್ಪ ಪೂಜಾರಿ ನಿಧನ

Suddi Udaya

ಉಜಿರೆ: ರಾಜ್ಯಹ್ಯಾಂಡ್ ಬಾಲ್ ತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತರಬೇತಿ

Suddi Udaya

ಮಚ್ಚಿನ: ನೆತ್ತರ ಸ. ಕಿ. ಪ್ರಾ. ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಶಿಬಿರ ಉದ್ಘಾಟನೆ

Suddi Udaya

ನವೋದಯ ಶಾಲಾ ಬಳಿ ದ್ವಿಚಕ್ರ ವಾಹನ ಹಾಗೂ ಬಸ್ ನಡುವೆ ಅಪಘಾತ: ಇಬ್ಬರಿಗೆ ಗಾಯ

Suddi Udaya

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಪುದುವೆಟ್ಟುನಲ್ಲಿ ಪ್ರತಿಭಟನೆ; ಸರಕಾರಕ್ಕೆ ಮನವಿ

Suddi Udaya

ಅಳದಂಗಡಿ: ಗುಡ್ ಫ್ಯೂಚೆರ್ ಆಂ.ಮಾ. ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆ

Suddi Udaya
error: Content is protected !!