ಉಜಿರೆ: ಅರಳಿ ಮಿತ್ರ ಯುವಕ ಮಂಡಲ ಮತ್ತು ಮಿತ್ರ ಮಹಿಳಾ ಮಂಡಳಿ ಅರಳಿ ಇದರ ಜಂಟಿ ಆಶ್ರಯದಲ್ಲಿ 27ನೇ ವರ್ಷದ ಪ್ರತಿಭಾ ಸಂಗಮವು ಡಿ.30 ರಂದು ಮಿತ್ರ ಯುವಕ ಮಂಡಲದ ರಂಗ ಮಂದಿರ ವೇದಿಕೆಯಲ್ಲಿ ನಡೆಯಿತು.
ಮೊದಲಿಗೆ ಹೊಸದಾಗಿ ರಚನೆಗೊಂಡ ಶ್ರೀ ಬ್ರಹ್ಮಾದೇವರ ಭಜನಾ ತಂಡ ಅರಳಿ ಇವರ ಕುಣಿತ ಭಜನೆಯ ಮೂಲಕ ಆರಂಭವಾಗಿ, ಸಭಾ ಅಧ್ಯಕ್ಷತೆಯನ್ನು ಯುವರಾಜ್ ಅರಳಿ ಅಧ್ಯಕ್ಷತೆಯಲ್ಲಿ ಕೆ ಧನಂಜಯ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಉಷಾಕಿರಣ್ ಕಾರಂತ್, ಬಾಲಕೃಷ್ಣ ಕೊರಮೇರು, ಸದಾಶಿವ ಹೆಗಡೆ, ಸನ್ಮಾನಿತರಾಗಿ ಜಯಾನಂದ ಘಟಕಾಧಿಕಾರಿ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರು, ಚೇತನ್ ಅರಳಿ, ಶ್ರೀಮತಿ ಸರಳಾಕ್ಷಿ ಪುರುಷೋತ್ತಮ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು .
ನಂತರ ಬಹುಮಾನ ವಿತರಣೆ ನಡೆಸಿ ರಾಜೇಶ್ ಶೈಕ್ಷಣಿಕ ವರದಿ ಮಂಡಿಸಿದರು.
ವತ್ಸಾಲ ಗೌಡ ಪ್ರೀತಿಯಿಂದ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ನಿಶಿತ್ ಬಂಗೇರ ನೆರವೇರಿಸಿ ಸಂತೋಷ್ ಸಾಲಿಯನ್ ಧನ್ಯವಾದವಿತ್ತರು.
ಊರಿನ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗೆಂದಗಿಡಿ ಎಂಬ ವಿಶೇಷ ನಾಟಕ ಮೂಲಕ ಕಾರ್ಯಕ್ರಮ ನಡೆಯಿತು.













