ಬಡಗಕಾರಂದೂರು ಸ.ಉ.ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ರಚನೆ

Suddi Udaya

Updated on:

ಅಳದಂಗಡಿ: ಬಡಗಕಾರಂದೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಲುಸ್ತುವಾರಿ ಸಮಿತಿ ಮತ್ತು ಶಾಲಾಭಿವೃದ್ಧಿ ಸಮಿತಿ ರಚನೆಯು ಶ್ರೀನಿವಾಸ್ ರಾವ್ ದೊರಿಂಜೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ನೂತನ ಅಧ್ಯಕ್ಷರಾಗಿ ಶಶಿಕಾಂತ್ ನಾಯಕ್, ಉಪಾಧ್ಯಕ್ಷರಾಗಿ ಶ್ರೀಮತಿ ಐಶ್ವರ್ಯ ನೀರಲ್ಕೆ ಆಯ್ಕೆಯಾದರು.

ಸಮಿತಿಯ ಸದಸ್ಯರಾಗಿ ಸುಜಾತಾ ಜೈನ್,ಜಮೀಳಾ, ಪವನ್ ಕುಮಾರ್,ಸಂದೀಪ್ ಎಸ್ ನೀರಲ್ಕೆ,ವೇದಾವತಿ, ಸಂಧ್ಯಾ, ಆನಂದ ಪೂಜಾರಿ ನೀರಲ್ಕೆ,ಲೀಲಾವತಿ,ಗಿರಿಜಾ,ಸೋನಿಯಾ, ಸಂತೋಷ್ ನಿನ್ನಿಕಲ್ಲು, ಜಗನ್ನಾಥ, ಶೇಖರ್, ಸದಾಶಿವ, ಪ್ರಭಾಕರ ನಾಯಕ್,ರೂಪಾ ರವರು ಆಯ್ಕೆಯಾದರು.

ರಚನಾ ಸಭೆಯಲ್ಲಿ ಸಿಆರ್ ಪಿ ರಾಜೇಶ್ ಆಚಾರ್ಯ, ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ರಾವ್, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಆಚಾರ್ಯ ಮಿತ್ತರೋಡಿ, ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ರವರು ಉಪಸ್ಥಿತರಿದ್ದರು

ದೈಹಿಕ ಶಿಕ್ಷಣ ಶಿಕ್ಷಕರಾದ ಸುನಿಲ್ ಬಾಪಟ್ ಕಾರ್ಯಕ್ರಮ ನಿರೂಪಿಸಿದರು, ಸಹಶಿಕ್ಷಕಿ ಶ್ರೀಮತಿ ಸರೋಜಾ ವಂದಿಸಿದರು.

Leave a Comment

error: Content is protected !!