ಕಳೆಂಜ: ಮಾಪಳದಡ್ಡ ಚಂದ್ರಾವತಿರಿಗೆ ಶ್ರೀ ಕ್ಷೇ. ಧ.ಗ್ರಾ. ಯೋಜನೆಯಿಂದ ಮಾಶಾಸನ ಮಂಜೂರು ಪತ್ರ ವಿತರಣೆ

Suddi Udaya

ಕಳೆಂಜ ಗ್ರಾಮದ ಮಾಪಳದಡ್ಡ ಚಂದ್ರಾವತಿಯವರು ಕಡು ಬಡವರಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇವರನ್ನು ಗುರುತಿಸಿ ತಿಂಗಳಿಗೆ 1000 ಮಾಶಾಸನವನ್ನು ಕ್ಷೇತ್ರದಿಂದ ಧರ್ಮಾಧಿಕಾರಿಗಳು ಮಂಜೂರು ಮಾಡಿರುತ್ತಾರೆ, ಮತ್ತು ಕೇದಗೆಡದಿ ಜಯಶ್ರೀಯವರು ಹುಟ್ಟಿನಿಂದಲೇ ಬುದ್ದಿಮಾಂದ್ಯರಾಗಿದ್ದು ಅವರಿಗೂ ಕ್ಷೇತ್ರದಿಂದ 1000 ಮಾಶಾಸನ ವನ್ನು ಮಂಜೂರು ಮಾಡಿರುತ್ತಾರೆ, ಮಂಜೂರಾತಿ ಪತ್ರವನ್ನು ಒಕ್ಕೂಟದ ಅಧ್ಯಕ್ಷರಾದ ಶೀಮತಿ ಸವಿತಾರವರು ವಿತರಿಸಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ರವೀಂದ್ರ ಬಿ ಕಳೆಂಜ ಬಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಕುಮಾರಿ ಭವಾನಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

error: Content is protected !!