27 C
ಪುತ್ತೂರು, ಬೆಳ್ತಂಗಡಿ
June 21, 2026
ಗ್ರಾಮಾಂತರ ಸುದ್ದಿ

ಭಾರೀ ಹದಗೆಟ್ಟ ಕಳಿಯ ದೇರ್ಜಾಲು ರಸ್ತೆ: ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ


ಬೆಳ್ತಂಗಡಿ : ಕಳಿಯ ಗ್ರಾಮದ ದೇರ್ಜಾಲು ರಸ್ತೆ ಭಾರೀ ಮಳೆಗೆ ನೀರು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ತುಂಬಾ ಹದಗೆಟ್ಟಿದೆ. ಪಂಚಾಯತ್ ಮತ್ತು ಖಾಸಗಿ ರಸ್ತೆಯೆಂದು ಮುಸುಕಿನ ಗುದ್ದಾಟದಲ್ಲಿ ಹದಗೆಟ್ಟ ಕೆಸರಿನಲ್ಲಿ ಓಡಾಡುವುದಕ್ಕೆ ಭಾರೀ ತೊಂದರೆ ಅಗುತ್ತದೆ.

ಕೆಲವು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ವತಿಯಿಂದ ವರ್ಷಕ್ಕೊಮ್ಮೆ ಚರಂಡಿ ರಿಪೇರಿ ಮತ್ತು ರಸ್ತೆಯ ನಿರ್ವಹಣೆ ಆಗುತ್ತಿತ್ತು. ವರ್ಷಗಳ ನಂತರ ರಸ್ತೆಯನ್ನು ಖಾಸಗಿ ರಸ್ತೆಯಾಗಿ ಮಾಡಬೇಕೆಂದು ಕಳಿಯ ಗ್ರಾಮ ಪಂಚಾಯತ್ ಗೆ ಓರ್ವ ವ್ಯಕ್ತಿ ಹತ್ತಾರು ಮನೆಯವರ ಸಹಿ ಸಂಗ್ರಹಿಸಿ ಮನವಿಯನ್ನು ಪಂಚಾಯತ್ ಗೆ ನೀಡಿದರು ಎಂದು ತಿಳಿದು ಬಂದಿದೆ. ಆದರೂ ಮೂರ್ನಾಲ್ಕು ಮನೆಯವರು

ಸೇರಿಕೊಂಡು ಸ್ವಂತ ಖರ್ಚಿನಲ್ಲಿ ರಸ್ತೆಯ ನಿರ್ವಹಣೆ ಮಾಡಿ ಕೊಂಡು ಬಂದಿದ್ದಾರೆ. ಈಗಾಗಲೇ ಸ್ವಂತ ಖರ್ಚಿನಲ್ಲಿ 3 ಪೀಕಪ್ ಜಲ್ಲಿ ಹುಡಿ ಹಾಕಿದರೂ ಇತ್ತೀಚಿನ ಭಾರೀ ಮಳೆಯ ಅನಾಹುತಕ್ಕೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.
ಅದುದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ,ಅನಾರೋಗ್ಯ ಬಾಧಿತರಿಗೆ ಮತ್ತು ವಾಹನ ಸಂಚಾರಕ್ಕೆ ಪದೆ,ಪದೆ ಸಮಸ್ಯೆಯಾಗುತ್ತಿದೆ.
ಪಂಚಾಯತ್ ಜನಪ್ರತಿ ನಿಧಿಗಳು, ಅಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸ ಬೇಕು. ಹಾಗೂ ಸಾರ್ವಜನಿಕ ಹದಗೆಟ್ಟ ರಸ್ತೆ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related posts

ಚಿಬಿದ್ರೆ – ಧರ್ಮಸ್ಥಳ ರಸ್ತೆಯಲ್ಲಿ ಬಿದ್ದ ಮರ : ಶೌರ್ಯ ವಿಪತ್ತು ಘಟಕದಿಂದ ತೆರವು

Suddi Udaya

ಅಳದಂಗಡಿ ಅರಸರಿಂದ ಗಣೇಶ್ ಪೂಜಾರಿ ಬೊಂಟ್ರೋಟ್ಟು ಅವರಿಗೆ ಪಟ್ಟಿ ಪ್ರದಾನ

Suddi Udaya

ಕಾಯರ್ತಡ್ಕ: ಕುಂಬಾರ ಸೇವಾ ಸಂಘದ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ

Suddi Udaya

ಉಜಿರೆ: ಶ್ರೀ ಧ.ಮ. ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನ್ಯೂ ಬೈನರಿ ಅಕ್ರಿಡಿಟೇಶನ್ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (NEP) ಕುರಿತು ಉಪನ್ಯಾಸ

Suddi Udaya

ಜಿಲ್ಲಾ ಮಟ್ಟದ ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿ ಡಾ ರವಿಕುಮಾರ್ ವಿತರಿಸಿದರು.

Suddi Udaya

ಬೆಳಾಲಿನಲ್ಲಿ ಯಾಂತ್ರಿಕೃತವಾಗಿ ಭತ್ತದ ಬೇಸಾಯ “ಯಂತ್ರಶ್ರೀ” ತರಬೇತಿ

Suddi Udaya
error: Content is protected !!