26.5 C
ಪುತ್ತೂರು, ಬೆಳ್ತಂಗಡಿ
September 20, 2026
Uncategorized

ಮಡಂತ್ಯಾರು ಪುಂಜಾಲಕಟ್ಟೆ ಎಲ್ಲಾ ಸಂಘಟನೆಗಳ ಸಹಕಾರದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಹೆದ್ದಾರಿಯ ಶ್ರಮದಾನ

ಬೆಳ್ತಂಗಡಿ: ಆ.8ರಂದು ನಡೆದ ಶ್ರಮದಾನವು ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬಂತು. ಅಲ್ಲಲ್ಲಿ ಉಂಟಾದ ದೊಡ್ಡ ದೊಡ್ಡ ಗಾತ್ರದ ಗುಂಡಿಗಳನ್ನು ಕಲ್ಲು ಮತ್ತು ಜಲ್ಲಿಗಳನ್ನು ಹಾಕಿ ಮುಚ್ಚಲಾಯಿತು. ತಾತ್ಕಾಲಿಕವಾಗಿ ಸಂಚಾರಕ್ಕೆ ಯೋಗ್ಯವೆನಿಸುವಂತಹ ಕಾಮಗಾರಿ ಮಾಡಿದ್ದು ಇದು ಮುಖ್ಯವಾಗಿ ಶಾಲಾ ಮಕ್ಕಳಿಗೆ ಪ್ರಯೋಜನವಾಗಲೆಂದು ಹಮ್ಮಿಕೊಂಡಿರುವ ಶ್ರಮದಾನವು ಆ ಎಲ್ಲಾ ವಾಹನ ಮಾಲಕರಿಗೆ ಮತ್ತು ಚಾಲಕರಿಗೆ ತಕ್ಕಮಟ್ಟಿಗೆ ನಿಟ್ಟುಸಿರು ಬಿಡುವಂತಾಯಿತು.

ಸುಮಾರು ನೂರಕ್ಕೂ ಮಿಕ್ಕಿ ಯುವಕ ಯುವತಿಯರು ಈ ಶ್ರಮದಾನದಲ್ಲಿ ಪಾಲ್ಗೊಂಡಿದ್ದು ಪ್ರಮುಖ ಸಂಘಟನೆಗಳ ಮುಖ್ಯಸ್ಥರು ಪದಾಧಿಕಾರಿಗಳೊಂದಿಗೆ ಹಾಜರಿದ್ದರು. ಹಿರಿಯ ವರ್ತಕರಾದ ವಿಷ್ಣು ದಾಸ್ ಬಾಳಿಗ ರವರು ಹಾರೆಯೊಂದಿಗೆ ಬಂದು ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಮತ್ತು ರೂಪಾಯಿ ಒಂದು ಸಾವಿರ ವನ್ನು ನೀಡಿ ಒಂದು ಪಿಕ್ ಅಪ್ ಜಲ್ಲಿ ತನ್ನದೆಂದು ತಿಳಿಸಿ ಸಹಕರಿಸಿದರು. ಅದರಂತೆ ಮಡಂತ್ಯಾರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಪಾತಿಲ ರೂ 500 , ರಾಜಶೇಖರ ಶೆಟ್ಟಿ 500 ವಾಹನ ಮಾಲಕರು ರೂ 100 ರಂತೆ ಇಬ್ಬರು ನೀಡಿ ಸಹಕರಿಸಿದರು.

ಸರಕಾರದಲ್ಲಿ ಹಣದ ಕೊರತೆಯಿರುವುದನ್ನು ಗಮನಿಸಿ ಸಾರ್ವಜನಿಕರಲ್ಲಿ ಒಂದು ರೂಪಾಯಿಯಾದರೂ ನೀಡಿ ಎಂದು ಬಟ್ಟೆ ಹಾಕಿ ಶೇಖರಣೆ ಮಾಡಲಾಯಿತು. ಸಾಂಕೇತಿಕವಾಗಿ ಶೇಖರಣೆಯಾದ ಮೊತ್ತವನ್ನು ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಪಾವತಿಸುವುದಾಗಿ ನಿರ್ಣಯಿಸಲಾಗಿದೆ.ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲಾ ಸಾರ್ವಜನಿಕ ಬಂಧುಗಳಿಗೆ ಸಂಘಟನೆಯ ಮುಖ್ಯಸ್ಥರಿಗೆ ಪದಾಧಿಕಾರಿಗಳಿಗೆ ವಂದನೆಗಳನ್ನು ಸಲ್ಲಿಸಲಾಯಿತು. ಅದೇ ರೀತಿ ಪುಂಜಾಲಕಟ್ಟೆ ಆರಕ್ಷಕ ಠಾಣೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ, ಉಪಹಾರ ವ್ಯವಸ್ಥೆ ಮಾಡಿದ ಶ್ರೀ ವಿಜಯ ಚಂದ್ರ ಮಾಲಾಡಿಯವರಿಗೆ, ಕೃತಜ್ಞತೆ ಸಲ್ಲಿಸಲಾಯಿತು.

Related posts

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಯಕ್ಷಾಶ್ರಯ ಯೋಜನೆ ಅಡಿಯಲ್ಲಿ ಗುರುವಾಯನಕೆರೆ ದೇವಿಪ್ರಸಾದ್ ಆಚಾರ್ಯರಿಗೆ ಮನೆ ಹಸ್ತಾಂತರ

Suddi Udaya

ಗುರುವಾಯನಕೆರೆ:ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ: ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ನಿಂದ ವಿವಿಧ ರೀತಿಯಲ್ಲಿ ಸಹಕರಿಸಿದ ಮಹನೀಯರಿಗೆ ಸನ್ಮಾನ

Suddi Udaya

ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ಗಾಲಿಕುರ್ಚಿ ಜಾಥಾ

Suddi Udaya

ಆಷಾಡ ಪ್ರಯುಕ್ತ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ಸಂಸ್ಥೆಯಿಂದ ವಿಶೇಷ ಕೊಡುಗೆ: ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

Suddi Udaya

ಕುವೆಟ್ಟು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!