ನ್ಯಾಯತರ್ಪು ಒಕ್ಕೂಟದ ಸಂಘದ ತ್ರೈಮಾಸಿಕ ಸಭೆ

Suddi Udaya

ನ್ಯಾಯತಪು೯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನ್ಯಾಯತರ್ಪು ಒಕ್ಕೂಟದ ತ್ರೈಮಾಸಿಕ ಸಭೆ ಆ.11 ರಂದು ನಾಳ ಹಾಲು ಉತ್ಪಾದಕರ ಸಂಘದ ಸಭಾಂಗಣದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ವಲಯ ಮೇಲ್ವಿಚಾರಕ ಹರೀಶ್ ಗೌಡ,ನ್ಯಾಯತರ್ಪು ಒಕ್ಕೂಟ ಸಂಘದ ಸಿದ್ದಪ್ಪ ಗೌಡ, ಪದಾಧಿಕಾರಿಗಳಾದ ರೀತಾ ಚಂದ್ರಶೇಖರ್,ಪುಷ್ಪ ಕೆ,ಪುಷ್ಪ ಎನ್, ಹಾಗೂ ನ್ಯಾಯತರ್ಪು ಸೇವಾ ಪ್ರತಿನಿಧಿ ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು,
ಸಂಘದ ಬೆಳವಣಿಗೆ ಹಾಗೂ ಸಾಲ ಪಡೆಯುವ, ಸಾಲ ಸಂದಾಯ ಹಾಗೂ ರೋಗಿಗಳು ಅಸ್ಪತ್ರೆಯಲ್ಲಿ ಆರೋಗ್ಯ ವಿಮೆಯನ್ನು ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ಸಭೆಯ ಉಸ್ತುವಾರಿ ಜವಾಬ್ದಾರಿಯನ್ನು ಭಾಗ್ಯ ಶ್ರೀ ತಂಡ ವಹಿಸಿದ್ದರು. ಸಂಘದ ಸದಸ್ಯರು ಸಭೆಯಲ್ಲಿ ಬಾಗವಹಿಸಿದರು.

Leave a Comment

error: Content is protected !!