July 23, 2026
ಗ್ರಾಮಾಂತರ ಸುದ್ದಿ

ಬೆಳ್ತಂಗಡಿ ಖಾಸಗಿ ರಸ್ತೆಗೆ ಅಡ್ಡಲಾಗಿ ಇಟ್ಟ ಕಾರು ಮಹಿಳೆಯಿಂದ ಕಾರು ಮಾಲಿಕನಿಗೆ ಹಿಗ್ಗ ಮುಗ್ಗ ಕ್ಲಾಸ್

ಬೆಳ್ತಂಗಡಿ : ಖಾಸಗಿ ರಸ್ತೆಗೆ ಅಡ್ಡಲಾಗಿ ಎರಡು ಗಂಟೆಗೂ ಅಧಿಕ ಸಮಯ‌ ಕೀಯಾ ಕಾರು ನಿಲ್ಲಿಸಿ ಹೋಗಿದ್ದ ಮಾಲೀಕ ಜಿಲ್ಲಾ ಕಿಸನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೋಹನ್ ಕಲ್ಮಂಜ ಎಂಬಾತನಿಗೆ ಸಂಚಾರಿ ಪೊಲೀಸರ ಮುಂದೆಯೇ ಮಹಿಳೆ ಹಾಗೂ ಸಾರ್ವಜನಿಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ಆ.11 ರಂದು ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ಶ್ರೀ ಗುರುದೇವ ಬ್ಯಾಂಕ್ ನ ಶಾಖಾ ಕಚೇರಿಗೆ ಹಾಗೂ ಖಾಸಗಿ ಮನೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ಆ.11 ರಂದು 12:30 ಕ್ಕೆ ಕೀಯಾ ಕಂಪನಿಯ KA-70-M-4209 ಸಂಖ್ಯೆಯ ಕಾರನ್ನು ಮಾಲೀಕ ಮೋಹನ್ ಕಲ್ಮಂಜ ಎಂಬಾತ ಇಟ್ಟು ಬೇರೆಡೆ ಹೋಗಿದ್ದು ಎಷ್ಟೇ ಕರೆ ಮಾಡಿ ತಿಳಿಸಿದರೂ ಕ್ಯಾರೆ ಮಾಡಿರಲ್ಲಿಲ್ಲ ಬ್ಯಾಂಕ್ ಸಭೆಗೆ ಬರಬೇಕಾದ ಸದಸ್ಯರ ಕಾರು ಒಳಪ್ರವೇಶ ಮಾಡಲು ಸಾಧ್ಯವಾಗಿರಲ್ಲಿಲ್ಲ, ಪಕ್ಕದ ಖಾಸಗಿ ಮನೆಯ ಮಾಲಕಿ ವಯಸ್ಸಾದ ತಾಯಿ ಜೊತೆ ಬೆಂಗಳೂರಿಗೆ ಹೋಗಲು ರಸ್ತೆ ಕಡೆ ಬರುವಾಗ ಕೂಡ ಕಾರು ಮಾಲೀಕ ಒಂದು ಗಂಟೆಯಾದರೂ ಬಂದೇ ಇಲ್ಲ ಕೊನೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರನ್ನು ಕರೆಸಲಾಯಿತು.

ಖಾಸಗಿ ಮನೆಯ ಮಹಿಳೆ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಕಾರು ಮಾಲೀಕ ಮೋಹನ್ ಕಲ್ಮಂಜ ನಿಗೆ ಕರೆ ಮಾಡಿ ತಕ್ಷಣ ಬರಲು ತಿಳಿಸಿದರೂ ತಡವಾಗಿ 2:30 ಕ್ಕೆ ಮಾಲೀಕ ಆಗಮಿಸಿದ್ದಾನೆ.

ಈ ವೇಳೆ ಪೊಲೀಸರ ಮುಂದೆಯೇ ಮಹಿಳೆ ಹಾಗೂ ಸಾರ್ವಜನಿಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು. ಈ ವೇಳೆ ಕಾರು ಮಾಲೀಕ ಮೋಹನ್ ಕಲ್ಮಂಜ ಮಹಿಳೆಗೆ ಸಾರ್ವಜನಿಕರ ಮುಂದೆ ಕ್ಷಮೆ ಕೇಳಿದ್ದಾನೆ. ಬಳಿಕ ಸಂಚಾರಿ ಪೊಲೀಸರು ಕಾರನ್ನು ಠಾಣೆ ವಶಕ್ಕೆ ಪಡೆದುಕೊಂಡಿದ್ದು‌‌‌. ಪೊಲೀಸರು ಕಾರಿನ ಮೇಲೆ ಮಾಲೀಕ ಮೋಹನ್ ಕಲ್ಮಂಜನಿಗೆ ದಂಡ ವಿಧಿಸಿದ್ದಾರೆ. ಮಹಿಳೆ ಕಾರು ಮಾಲೀಕ ಮೋಹನ್ ಕಲ್ಮಂಜನಿಗೆ ಕ್ಲಾಸ್ ತೆಗೆದುಕೊಂಡ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ

.

Related posts

ಕುಂಟಿನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕೊಕ್ಕಡ ಸಂತ ಜೋನರ ಹಿ.ಪ್ರಾ.ಶಾಲೆ ಕೌಕ್ರಾಡಿ ಶಾಲಾ ಪ್ರಾರಂಭೋತ್ಸವ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ “ಕೊಳಂಬೆ” ಕಿರುಚಿತ್ರ ನಿರ್ಮಾಣ: ವಿಕೆ ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ 2025, ‘ಕೊಳಂಬೆ’ ಬೆಸ್ಟ್ ಕಿರುಚಿತ್ರ ಡಬಲ್ ಪ್ರಶಸ್ತಿ,ಅನೀಶ್ ಅಮೀನ್ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

Suddi Udaya

ಕುವೆಟ್ಟು: ಸ.ಉ.ಹಿ.ಪ್ರಾ.ಶಾಲೆಯಲ್ಲಿ ಕನಕದಾಸ ಜಯಂತಿ

Suddi Udaya

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಉಪನ್ಯಾಸ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ 1.07ಕೋಟಿ ನಿವ್ವಳ ಲಾಭ, ಶೇ. 11 ಡಿವಿಡೆಂಡ್ ಘೋಷಣೆ

Suddi Udaya
error: Content is protected !!