ರಾಜ್ಯಮಟ್ಟದ ಪುರುಷರ ಹ್ಯಾಂಡ್ ಬಾಲ್ ಚಾಂಪಿಯನ್ಶಿಪ್ – ಮಾದಪ್ಪ ಸ್ಮಾರಕ ಟ್ರೋಫಿ

Suddi Udaya

Updated on:

ಉಜಿರೆ: ರಾಜ್ಯಮಟ್ಟದ ಪುರುಷರ ಹ್ಯಾಂಡ್ ಬಾಲ್ ಚಾಂಪಿಯನ್ಶಿಪ್ ಮಾದಪ್ಪ ಸ್ಮಾರಕ ಟ್ರೋಫಿ ಪಂದ್ಯಾಟವು ಆ. 10,11ರಂದು ಮೈಸೂರಿನ ಚಾಮುಂಡಿ ವಿಹಾರ್ ಸ್ಟೇಡಿಯಂನಲ್ಲಿ ನಡೆಯಿತು.


ಎಸ್ ಡಿ ಎಂ ಕಾಲೇಜಿನ 16 ವಿದ್ಯಾರ್ಥಿಗಳು ಭಾಗವಹಿಸಿ, ಚಾಂಪಿಯನ್ಶಿಪ್ ಪಟ್ಟವನ್ನು ಗಳಿಸಿದ್ದಾರೆ. ಫೈನಲ್ ನಲ್ಲಿ ಕರ್ನಾಟಕದ ಪೊಲೀಸ್ ತಂಡವನ್ನು 26/20 ಗೋಲು ಗಳೊಂದಿಗೆ ಮಣಿಸಿ, ಇತಿಹಾಸದ ಪ್ರಥಮ ಬಾರಿಗೆ ಚಾಂಪಿಯನ್ಶಿಪ್ ಪಟ್ಟವನು ಅಲಂಕರಿಸಿದೆ.


ಆದಿತ್ಯ ತಂಡದ ನಾಯಕನಾಗಿ, ನಿತಿನ್, ಮಯೂರ್ ಡಿ.ಆರ್ , ಸುಗನ್, ತರುಣ್ , ಗಗನ್ ಆರ್, ಮನೋಜ್, ರಾಹುಲ್, ದಿನೇಶ್, ಸಾತ್ವಿಕ್, ಚಿಂತನ್ , ಪುನೀತ್ ಕುಮಾರ್, ಸುರೇಶ್ ವಾರ್ತಿ, ರವಿಕುಮಾರ್, ಅಭಿಷೇಕ್ ಎಸ್ ಡಿ ಎಮ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಇವರಿಗೆ ಸುದೀನ ಇವರು ತರಬೇತಿಯನ್ನು ನೀಡಿರುತ್ತಾರೆ.

ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಎ ಕುಮಾರ್ ಹೆಗ್ಡೆ ಮತ್ತು ಎಸ್ ಡಿ ಎಂ ಕ್ರೀಡಾ ನಿರ್ದೇಶಕರಾದ ರಮೇಶ್ ಹೆಚ್ ಇವರು ಪ್ರಸಂಶೆ ಪಟ್ಟರು.

Leave a Comment

error: Content is protected !!