ಅರುಣಾಚಲ ಪ್ರದೇಶದಲ್ಲಿ ಐಟಿಬಿಪಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಡಿರುದ್ಯಾವರ ಹರ್ಷಿತ್ ನೇಮಕ

Suddi Udaya

ಕಡಿರುದ್ಯಾವರ: ಇಲ್ಲಿಯ ಹೊಸಮನೆ ಹರ್ಷಿತ್ ರವರು ಐಟಿಬಿಪಿ ಸಬ್ ಇನ್ಸ್‌ಪೆಕ್ಟರ್ ಆಗಿ ಅರುಣಾಚಲ ಪ್ರದೇಶದಲ್ಲಿ ಆ.20 ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.


ಹರ್ಷಿತ್‌ರವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಡಿರುದ್ಯಾವರ ಗ್ರಾಮದ ಕೊಡಿಯಾಲ್‌ಬೈಲ್ ಶಾಲೆಯಲ್ಲಿ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಎಸ್‌ಡಿಎಂ (ಕನ್ನಡ) ಉಜಿರೆಯಲ್ಲಿ, ಪಿ.ಯು ಶಿಕ್ಷಣವನ್ನು ಎಸ್.ಡಿ.ಎಂ ಉಜಿರೆಯಲ್ಲಿ, ಉಜಿರೆ ಎಸ್‌ಡಿಎಂ ನಲ್ಲಿ ಇಂಜಿನಿಯರಿಂಗ್ ಮಾಡಿ 2022 ರಲ್ಲಿ ನಡೆದ ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ 2024 ಜನವರಿಯಲ್ಲಿ 6 ತಿಂಗಳ ತರಬೇತಿಗಾಗಿ ರಾಜಸ್ಥಾನದ ಅಲ್ವರ್‌ಗೆ ತೆರಳಿದರು. ಇದೀಗ ತರಬೇತಿ ಮುಗಿಸಿ ಐಟಿಬಿಪಿ ಸಬ್ ಇನ್ಸ್‌ಪೆಕ್ಟರ್ ಆಗಿ ಅರುಣಾಚಲ ಪ್ರದೇಶದಲ್ಲಿ ಆ.20 ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಇವರು ಕಡಿರುದ್ಯಾವರ ಗ್ರಾಮದ ಹೊಸಮನೆ ರಾಮಚಂದ್ರ ಗೌಡ ಮತ್ತು ಜಯಂತಿ ದಂಪತಿಯ ಪುತ್ರ.

Leave a Comment

error: Content is protected !!