ಉಜಿರೆ ವರ್ತಕರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ: ವರ್ತಕರ ಸಂಘದ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಉಜಿರೆಯ ಬಸ್ಸ್ ಸ್ಟ್ಯಾಂಡ್ ಬಳಿ ಆಚರಿಸಲಾಯಿತು.

ವರ್ತಕರ ಸಂಘದ ಹಿರಿಯ ಸದಸ್ಯ ಉದ್ಯಮಿ ಭರತ್ ಮಹಾಲಕ್ಷ್ಮಿ ಉಜಿರೆ ಧ್ವಜಾರೋಹಣ ನೆರವೇರಿಸಿದರು. ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು, ವರ್ತಕರ ಸಂಘದ ಗೌವಾಧ್ಯಕ್ಷರ ಶರತ್ ಕೃಷ್ಣ ಪಡುವೆಟ್ನಾಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಉಜಿರೆ ಗ್ರಾ.ಪಂ. ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಪಂ. ಅಭಿವೃದ್ದಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ , ವರ್ತಕರ ಸಂಘದ ಅಧ್ಯಕ್ಷ ಕೆ. ಅರವಿಂದ ಕಾರಂತ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಗೌಡ, ಉಪಾಧ್ಯಕ್ಷರುಗಳಾದ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ಉಜಿರೆ, ಮಂಜುನಾಥ ಬಾಳಿಗ, ಗಣೇಶ್ ನಾಯರ್, ಶ್ರೀಧರ್ ಕೆ.ವಿ., ಹುಕುಂರಾಮ್ ಪಟೇಲ್, ಎಂ.ಎಸ್. ದಿನೇಶ್ ದಿಶಾ, ಪೂವಪ್ಪ ಗೌಡ, ಪ್ರಭಾಕರ್ ಹೆಗ್ಡೆ, ಪ್ರಶಾಂತ್ ಜೈನ್, ಅನುಗ್ರಹ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಸಂತ ಇನ್ನಿತರರು ಹಾಗೂ ವರ್ತಕರ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ವರ್ತಕರ ಸಂಘದ ಖಜಾಂಚಿ ಅಬೂಬಕ್ಕರ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಪ್ರಸಾದ್ ಬಿ. ಎಸ್. ರಮ್ಯ ಫ್ಯಾನ್ಸಿ ಧನ್ಯವಾದವಿತ್ತರು.

Leave a Comment

error: Content is protected !!