ಆ.17: ಬೆಳ್ತಂಗಡಿ ಲಯನ್ಸ್‌ ಕ್ಲಬ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Suddi Udaya

ಬೆಳ್ತಂಗಡಿ : ಲಯನ್ಸ್‌ ಕ್ಲಬ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಶ್ರೀ ಸ್ಟಾರ್ ಯುವಕ ಮಂಡಲ (ರಿ.) ಪಣೆಜಾಲು, ಶ್ರೀ ಸ್ಟಾರ್ ಮಹಿಳಾ ಮ೦ಡಲ (ರಿ.) ಪಣೆಜಾಲು, ಶ್ರೀ ಸ್ಟಾರ್ ಶಟಲ್ ಬ್ಯಾಡ್ಮಿಂಟನ್ ಫೌಂಡೇಶನ್ ಇವರ ಸಹಯೋಗದಲ್ಲಿ 32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಲಯನ್ಸ್ ಕಪ್-2024 ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟವು ಆ.17 ರಂದು ಸಂಜೆ ಗಂಟೆ 6-00ಕ್ಕೆ ಪಣೆಜಾಲು ಲಯನ್ಸ್‌ ಒಳಾ೦ಗಣ ಕ್ರೀಡಾ೦ಗಣದಲ್ಲಿ ನಡೆಯಲಿದೆ.

ಪಂದ್ಯಾಟದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ದೇವದಾಸ್ ಶೆಟ್ಟಿ ಹಿಬರೋಡಿ ನಡೆಸಿಕೊಡಲಿದ್ದಾರೆ. ನಲವತ್ತು ವಯಸ್ಸು ಮೇಲಿನ ಮತ್ತು ಕೆಳಗಡೆ ಈ ಎರಡು ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ. ಬೆಳ್ತಂಗಡಿ ತಾಲೂಕಿನ ಜನರಿಗೆ ಮಾತ್ರ ಅವಕಾಶವಿದ್ದು ಹೆಚ್ಚಿನ ಕ್ರೀಡಾ ಅಭಿಮಾನಿಗಳು ಇದರ ಅವಕಾಶ ಪಡೆದುಕೊಳ್ಳಬೇಕೆಂದು ಸಂಘಟಕರು ತಿಳಿಸಿದ್ದಾರೆ.

Leave a Comment

error: Content is protected !!