ರಾಜ್ಯ ಮಟ್ಟದ ಪ್ರೌಢ ಶಾಲಾ ಬಾಲಕರ ವಿಭಾಗದ ಕಬ್ಬಡಿ ಪಂದ್ಯಾಟ: ಸುಲ್ಕೇರಿ ಶ್ರೀರಾಮ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಸುಲ್ಕೇರಿ: ಹಾಸನದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ ಪ್ರೌಢ ಶಾಲೆಯ ಬಾಲಕರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಸುಲ್ಕೇರಿ ಶ್ರೀರಾಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಹೈದರಾಬಾದ್ ನಲ್ಲಿ ನಡೆಯುವ ವಿದ್ಯಾಭಾರತಿಯ ಕ್ಷೇತ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳಿಗೆ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ಸುಲ್ಕೇರಿ ಸದಸ್ಯರಾದ ವರುಣ್ ಶೆಟ್ಟಿ ಸುಲ್ಕೇರಿ ಹಾಗೂ ಸುಕೇಶ್ ಹೆಗ್ಡೆ ಸುಲ್ಕೇರಿ ಮಾರ್ಗದರ್ಶನ ನೀಡಿರುತ್ತಾರೆ. ಹಾಗೂ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ಸುಲ್ಕೇರಿ ಇದರ ಸದಸ್ಯರಾದ ಕೀರ್ತನ್ ಹೆಗ್ಡೆ, ಶ್ರೀನಿಧಿ ಶೆಟ್ಟಿ ವರುಣ್ ಪೂಜಾರಿ, ದಿನೇಶ್ ಶೆಟ್ಟಿ, ಹಾಗೂ ಎಂ.ಎಸ್.ಸಿ. ನ ಸರ್ವ ಸದಸ್ಯರುಗಳು ಸಹಕಾರ ನೀಡಿರುತ್ತಾರೆ.

Leave a Comment

error: Content is protected !!