Uncategorized

ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರ ಕ್ಯೂಆರ್ ಕೋಡ್ ಮತ್ತು ಲೋಗೋ ಬಿಡುಗಡೆ

ಮೊಗ್ರು :ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕದಲ್ಲಿ ಇರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಇಂದು  ಮಕ್ಕಳಿಗೆ ಮೂಲಭೂತ ವ್ಯವಸ್ಥೆ ಕೊರತೆ,ಸ್ಪರ್ಧಾತ್ಮಕ ಶಿಕ್ಷಣ
ವ್ಯವಸ್ಥೆಯಿಂದ ಹಾಗೂ ಇಂಗ್ಲಿಷ್ ಶಿಕ್ಷಣದ ವ್ಯಾಮೋಹದಿಂದ ಗ್ರಾಮೀಣ ಮಟ್ಟದ ಮಕ್ಕಳು ಹೊರ ಊರಿನ ಪ್ರತಿಷ್ಠಿತ ಶಾಲೆಗೆ ತೆರಳತ್ತಿರುವ ಕ
ಸರಕಾರಿ ಶಾಲೆ ಮುಚ್ಚುವ ಹಂತಕ್ಕೆ ಬಂದಿರುತ್ತದೆ.ಈ ವಿಷಯವನ್ನು ಮನಗಂಡ ಮುಗೇರಡ್ಕ ಗ್ರಾಮಸ್ಥರು ಈ ಶಾಲೆಯನ್ನು ಉಳಿಸಿ ಬೆಳೆಸುವವ ಬಗ್ಗೆ ಮುಗೇರಡ್ಕದ ಸ್ಥಳೀಯ ನಿವಾಸಿಗಳದ ಒಬ್ಬ ಯೋಗ ಗುರು,13 ಕೃಷಿಕರು,2 ಮಿಲಿಟರಿ ಸೇವೆಯಲ್ಲಿ ಇರುವರು  ಸೇರಿ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ (ರಿ ) ಮೊಗ್ರು ಎಂಬ ಟ್ರಸ್ಟ್ ರಚನೆ ಆಗಿರುತ್ತದೆ.ಈ ಟ್ರಸ್ಟ್ ಮೂಲಕ ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಮುಗೇರಡ್ಕ ಶಾಲೆಯನ್ನು ಅಭಿವೃದ್ಧಿ ಪಡಿಸಿ, ಮುಂದಿನ ವರ್ಷದಿಂದ ನುರಿತ ಇಂಗ್ಲಿಷ್ ಶಿಕ್ಷಕರನ್ನು ಟ್ರಸ್ಟ್ ವತಿಯಿಂದ ನೇಮಕ ಮಾಡಿಸಿ  ಸರಕಾರಿ ಕನ್ನಡಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಮಕ್ಕಳಿಗೆ ಉಚಿತವಾಗಿ ನೀಡುವುದು ಈ ಟ್ರಸ್ಟ್ ನ ಮುಂದಿನ ಉದ್ದೇಶವಾಗಿರುತ್ತದೇ.ಈ ಟ್ರಸ್ಟ್ ಈಗಾಗಲೇ ಸರಕಾರ ನಿಯಮ ಪ್ರಕಾರ ರೆಜಿಸ್ಟರ್ ಆಫೀಸ್ ಲಿ ನೋಂದಣಿವಾಗಿ ಆಗಿರುತ್ತದೆ. ಟ್ರಸ್ಟ್ ಸಾರ್ವಜನಿಕ ದೇಣಿಗೆಯನ್ನು ಬಯಸುವ ಕಾರಣ ಬ್ಯಾಂಕ್ ಖಾತೆಯನ್ನು ತೆರೆದಿದ್ದು ಇದರ QR code ನ್ನು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಧಿಕಾರಿಗಳದ ಶ್ರೀ ಡಿ ವೀರೇಂದ್ರ ಹೆಗಡೆ ಇವರು ಬಿಡುಗಡೆ ಮಾಡಿದರು. ಹಾಗೇನೇ ಟ್ರಸ್ಟ್ ನ ಲೋಗೋ ವನ್ನು ಉಜಿರೆ laxmi industies ಮಾಲಕರದ ಶ್ರೀಯುತ ಮೋಹನ್ ಕುಮಾರ್ ಇವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕುಶಾಲಪ್ಪ ಗೌಡ N ಯೋಗ ಗುರುಗಳು ಮಂಗಳೂರು, ಕಾರ್ಯದರ್ಶಿಗಳು ಶ್ರೀ ಮನೋಹರ್ ಗೌಡ ಅಂತರ, ಉಪಾಧ್ಯಕ್ಷರಾದ ಆನಂದ ಗೌಡ B ಮೊಗ್ರು, ಚಂದ್ರಹಾಸ್ ದೇವಸ್ಯ, ಕೋಶಧಿಕಾರಿಗಳಾದ ಪುರಂದರ ಗೌಡ N, ಜೊತೆ ಕಾರ್ಯದರ್ಶಿ ಉಮೇಶ್ ಗೌಡ P , ಟ್ರಸ್ಟಿಗಳಾದ ಸುಧಾಕರ್ N. ಬಾಬು ಗೌಡ. ದೀಕ್ಷಿತ್ ಎರ್ಮಲ D.ಚಂದಪ್ಪ D.S.ಕೇಶವ J ಇವರು ಉಪಸ್ಥಿತರಿದ್ದರು

Related posts

ಕರಾಟೆ ಸ್ಪರ್ಧೆ: ಬೆಳ್ತಂಗಡಿ ಶ್ರೀ ಧ.ಮಂ. ಆಂ. ಮಾ. ಶಾಲೆಯ ವಿದ್ಯಾರ್ಥಿ ಯಶಸ್ವಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಸಾರ್ವಜನಿಕ ಪ್ರದೇಶದಲ್ಲಿ ಬೇಕಾಬಿಟ್ಟಿ ಕಸ ಎಸೆದವರಿಂದಲೇ ವಿಲೇವಾರಿ ಮಾಡಿ, ದಂಡ ವಿಧಿಸಿದ: ಲಾಯಿಲ ಗ್ರಾ‌ಪಂ ಪಿಡಿಓ ಶ್ರೀನಿವಾಸ್ ಡಿ ಪಿ ಹಾಗೂ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿಯವರಿಗೆ ಸಾರ್ವಜನಿಕರಿಂದ ಪ್ರಶಂಸೆ

Suddi Udaya

ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾದ ಎಸ್‌ಡಿಪಿಐ ಮುಖಂಡರ ನಿಯೋಗ

Suddi Udaya

ಸುದ್ದಿ ಉದಯ ಫಲಶ್ರುತಿ: ಬಂದಾರು ಬೋಲೋಡಿ ಎಂಬಲ್ಲಿ ಗುಡ್ಡ ಕುಸಿತ ವರದಿ ಬೆನ್ನಲ್ಲೇ ಗ್ರಾ.ಪಂ. ನಿಂದ ತಕ್ಷಣ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ

Suddi Udaya

ಡಿ.15: ಸಾವ್ಯ ದ.ಕ.ಜಿ.ಪಂ. ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಸಂಭ್ರಮಾಚರಣೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಮತ್ತು ಡಿ.ಎಡ್ ಕಾಲೇಜಿನಲ್ಲಿ ‘ಆಟಿಡೊಂಜಿ ದಿನ’

Suddi Udaya
error: Content is protected !!