25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಾಮಾನ್ಯ ಸಭೆ: ರೂ. 6.74 ಲಕ್ಷ ಲಾಭ, ಶೇ.20 ಡಿವಿಡೆಂಟ್

ಬಳಂಜ: ಬಳಂಜ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2023-24 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಶ್ರೀಮತಿ ಪುಷ್ಪಾರವರ ಅಧ್ಯಕ್ಷತೆಯಲ್ಲಿ ಆ.17 ರಂದು ಭಾಗಿ ಮುಂಡಪ್ಪ ಪೂಜಾರಿ ಸಭಾ ವೇದಿಕೆಯಲ್ಲಿ ಜರುಗಿತು.

ಸಂಘವು ರೂ.6.74 ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ.65 ಬೋನಸ್ ಹಾಗೂ ಶೇ.20 ಡಿವಿಡೆಂಟ್ ನೀಡಲಾಗುವುದು.

ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ. ಸತೀಶ್ ರಾವ್ ಹಾಗೂ ವಿಸ್ತರಣಾಧಿಕಾರಿ ಸುಚಿತ್ರಾ ರವರು ಸಭೆಯಲ್ಲಿ ಸದಸ್ಯರಿಗೆ ಹೈನುಗಾರಿಕಾ ಮಾಹಿತಿಯನ್ನು ನೀಡಿದರು. ಉಪಾಧ್ಯಕ್ಷೆ ಮಾಲಿನಿ , ಶಾಂಭವಿ, ಅರುಣಾ ನಿರುಪಮಾ, ಉಷಾ, ಜಯಂತಿ, ಶೋಭಾ, ಯಶೋಧಾ, ಬೇಬಿ, ಉಪಸ್ಥಿತರಿದ್ದರು.

ಮುಖ್ಯ ನಿರ್ವಹಣಾಧಿಕಾರಿ ಭಾರತಿ ವರದಿ ಮತ್ತು ಲೆಕ್ಕ ಪತ್ರಗಳನ್ನು ಮಂಡಿಸಿದರು. ಸಂಘದ ಹಿರಿಯ ಹೈನುಗಾರರು , ನಿರ್ದೇಶಕರು ಆದ ಯಶೋದ ರವರನ್ನು ಸನ್ಮಾನಿಸಲಾಯಿತು. ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿ ಪ್ರಥಮ ಸ್ಥಾನ ಪಡೆದ ಪ್ರಮೀಳಾ, ದ್ವಿತೀಯ ನಂದಿನಿ, ತೃತೀಯ ಮಾಲಿನಿ ಹಾಗೂ 9 ಜನ ಅತೀ ಹೆಚ್ಚು ಹಾಕಿದ ಗುಣವತಿ , ಮುಕ್ತಾ, ಅರುಣ ಹೆಗ್ಡೆ, ಹರ್ಷಿಣಿ, ಸುಖಾರೈ, ಜಯಶ್ರೀ, ಪುಷ್ಪಾ, ಹರ್ಷಲತಾ, ಉಷಾ ಇವರನ್ನು ಸಭೆಯಲ್ಲಿ ಗುರುತಿಸಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮನ್ವಿತಾ ಹಾಗೂ ರಕ್ಷಿತ್ ಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ನಿರ್ದೇಶಕರಾದ ನಿರುಪಮಾ ಸ್ವಾಗತಿಸಿ, ಸದಸ್ಯೆ ನಂದಿನಿ ನಿರೂಪಿಸಿದರು. ಉಪಾಧ್ಯಕ್ಷೆ ಮಾಲಿನಿ ವಂದಿಸಿದರು. ಸಭೆಯಲ್ಲಿ ಸಂಘಕ್ಕೆ ಸ್ಥಳ ದಾನ ,ಮಾಡಿದಂತಹ ಹೆಚ್. ಧರ್ಣಪ್ಪ ಪೂಜಾರಿ ಯವರು ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಸುರೇಶ್ ಪೂಜಾರಿ ಜೈಮಾತಾ ಹಾಗೂ ರೇಶ್ಮಾ ಸಹಕರಿಸಿದರು.

Related posts

ಗೋವಿಂದೂರು : ಯುವಕ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕಕ್ಕಿಂಜೆ: ಅಣಿಯೂರು ಸ.ಉ.ಹಿ. ಪ್ರಾ. ಶಾಲಾ ಹಳೆ ವಿದ್ಯಾರ್ಥಿ ಸಂಘ-ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಎಂಸಿಎಫ್ ನ ಸಿ ಎಸ್ ಆರ್ ಆಕ್ಟಿವಿಟಿ ಯೋಜನೆ ಅಡಿಯಲ್ಲಿ ಪೆರಿಂಜೆ ಸ.ಹಿ.ಪ್ರಾ. ಶಾಲೆಯಲ್ಲಿ ನಿರ್ಮಿಸಲಾದ ನೂತನ ಶೌಚಾಲಯದ ಉದ್ಘಾಟನೆ

Suddi Udaya

ಕಳಿಯ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮತಯಾಚನೆ

Suddi Udaya

ನಾಲ್ಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಜನಮಂಗಳ ಯೋಜನೆಯಡಿ ಮಂಜೂರಾದ ವಾಕಿಂಗ್ ಸ್ಟಿಕ್ ಹಸ್ತಾಂತರ

Suddi Udaya

ಧರ್ಮಸ್ಥಳ: ಜೋಡುಸ್ಥಾನದಲ್ಲಿ ಮಹಿಳೆ ನೇಣುಬಿಗಿದು ಆತ್ಮಹತ್ಯೆ

Suddi Udaya
error: Content is protected !!