ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್, ಭಾರತೀಯ ಕಥೊಲಿಕ್ ಯುವ ಸಂಚಲನ ಹಾಗೂ ಯುವ ಕಥೊಲಿಕ್ ವಿದ್ಯಾರ್ಥಿ ಸಂಚಲನ ವತಿಯಿಂದ ಸ್ವಚ್ಛತಾ ಅಭಿಯಾನ

ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿ, ಭಾರತೀಯ ಕಥೋಲಿಕ್ ಯುವ ಸಂಚಲನ ಬೆಳ್ತಂಗಡಿ ಘಟಕ, ಯುವ ಕಥೊಲಿಕ್ ವಿದ್ಯಾರ್ಥಿ ಸಂಚಲನ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನವು ಆ.18 ರಂದು ಹೋಲಿ ರಿಡೀಮರ್ ಚರ್ಚ್ ಆವರಣದಿಂದ ಬೆಳ್ತಂಗಡಿ ಬಸ್ ನಿಲ್ದಾಣದವರೆಗೆ ಕಾರ್ಯಕ್ರಮ ನಡೆಯಿತು.

ಈ ಅಭಿಯಾನಕ್ಕೆ ವಂದನೀಯ ಸ್ವಾಮಿ ಫಾ. ವಾಲ್ಟರ್ ಡಿ’ಮೆಲ್ಲೋ, ಹೋಲಿ ರಿಡೀಮರ್ ಸ್ಕೂಲ್ ಪ್ರಿನ್ಸಿಪಾಲ್ ರೆ. ಫಾ. ಕ್ಲಿಫರ್ಡ್ ಪಿಂಟೋ, ಪ್ಯಾರಿಷ್ ಕೌನ್ಸಿಲ್ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಉದ್ಯಮಿ ಪ್ರೇಮ್ ರಾಜ್ ಸಿಕ್ವೇರಾ, ಸಿಸ್ಟರ್ ಜೆಸಿಂತಾ, ಮತ್ತು ಸಹೋದರ ಅಲ್ರಿಕ್ ಚಾಲನೆ ನೀಡಿದರು.

ಐಸಿವೈಎಮ್ ಆನಿಮೇಟರ್‌ಗಳಾದ ವಿಲ್ಸನ್ ಮೋನಿಸ್, ಡಾ. ಫ್ಲಾವಿಯಾ ಪೌಲ್ ಮತ್ತು ವೈಸಿಎಸ್ ಆನಿಮೇಟರ್‌ಗಳಾದ ಜೇಮ್ಸ್ ಬಾರ್ಬೋಜಾ ಮತ್ತು ಶ್ರೀಮತಿ ಪ್ರೀತಾ ಅವರ ಮಾರ್ಗದರ್ಶನದಲ್ಲಿ, ಐಸಿವೈಎಮ್ ಅಧ್ಯಕ್ಷೆ ಅನ್ಸೆಲ್ಮಾ ಡಿಸೋಜಾ, ಐಸಿವೈಎಮ್ ಕಾರ್ಯದರ್ಶಿ ಅಜಯ್ ರೋಡ್ರಿಗಸ್, ವೈಸಿಎಸ್ ಕಾರ್ಯದರ್ಶಿ ಸ್ಟಾಲನ್ ಅವರ ನೇತೃತ್ವದಲ್ಲಿ, ಯುವಕರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ಸುಮಾರು 30ಕ್ಕೂ ಹೆಚ್ಚಿನ ಉತ್ಸಾಹಿ ಯುವಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.

Related posts

ಧರ್ಮಸ್ಥಳ: ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟ

Suddi Udaya

ಪುದುವೆಟ್ಟು: ನಡ್ಯೇಲು ಕಾಡಾನೆ ದಾಳಿ : ಅಪಾರ ಕೃಷಿ ಹಾನಿ

Suddi Udaya

ಕಣಿಯೂರು ಗ್ರಾ. ಪಂ. ಸಭಾಭವನ, ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನ ಹಾಗೂ ಪದ್ಮುಂಜ ಅಂಗನವಾಡಿ ಕೇಂದ್ರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

Suddi Udaya

ಬೆಳ್ತಂಗಡಿ : ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ‘ಅಭಿನಂದನಂ’ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಆರ್‌.ಆರ್‌.ನಗರದಲ್ಲಿ ಕೈಮಾರದ ಆರನೇ ಶಾಖೆ ಲೋಕಾರ್ಪಣೆ: ಡಾ.ಪದ್ಮಪ್ರಸಾದ ಅಜಿಲ, ನಟರಾದ ಗಣೇಶ್‌, ದಿಗಂತ್‌ ಭಾಗಿ

Suddi Udaya

ಪದ್ಮುಂಜ ಪ್ರಾ.ಕೃ.ಪ. ಸಹಕಾರಿ ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya
error: Content is protected !!