July 23, 2026
Uncategorized

ಮುಂಡಾಜೆ ಗ್ರಾ.ಪಂ. ನ ಮೊದಲ ಹಂತದ ಗ್ರಾಮಸಭೆ

ಮುಂಡಾಜೆ:ಮುಂಡಾಜೆ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ‌ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಇವರ ಅಧ್ಯಕ್ಷತೆಯಲ್ಲಿ ಗ್ರಾಮ‌ ಪಂಚಾಯತ್ ಸಭಾಭವನದಲ್ಲಿ ಆ. 22 ನಡೆಯಿತು.

ಮುಂಡಾಜೆ ಆರೋಗ್ಯ ಇಲಾಖೆಗೆ ಖಾಯಂ ವೈದ್ಯಾಧಿಕಾರಿಯ ನೇಮಕವಾಗಬೇಕು. ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಕೆಲವೊಂದು ದಾಖಲೆಗೆ ಸಹಿ ಮಾಡಲು ಕೂಡ ಖಾಯಂ ವೈದ್ಯಾಧಿಕಾರಿ ಇರದಿರುವುದರಿಂದ ಸಮಸ್ಯೆ ಎದುರಾಗಿದೆ. ವೈದ್ಯಾಧಿಕಾರಿಯ ಮೊಬೈಲ್ ನಂಬರನ್ನು ಆಸ್ಪತ್ರೆಯ ಸಿಬ್ಬಂದಿಗಳು ಕೊಡುವುದಿಲ್ಲ ಯಾಕೆ? ವೈದ್ಯಾಧಿಕಾರಿ ಮೊಬೈಲ್ ನಂಬರನ್ನು ಬೋರ್ಡ್ ಮೇಲೆ ಹಾಕಬೇಕೆಂದು ನಾಮದೇವ್ ರಾವ್ ಆಗ್ರಹಿಸಿದರು.ಮಾರ್ಗದರ್ಶಿ ಅಧಿಕಾರಿಯಾಗಿ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿಯಾದ ಪ್ರತಿಮಾ ಅವರು ಗ್ರಾಮ ಸಭೆಯನ್ನು ಉತ್ತಮವಾಗಿ ನಡೆಸಿಕೊಟ್ಟರು. ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ ಎಲ್ಲರನ್ನು ಸ್ವಾಗತಿಸಿ,ಅನುಪಾಲನಾ ವರದಿ ಮತ್ತು ಜಮಾಖರ್ಚಿನ ವಿವಿರವನ್ನು ಸಭೆಯ ಮುಂದಿಟ್ಟರು.ಪಂಚಾಯತ್ ಉಪಾದ್ಯಕ್ಷೆ ಸುಮಲತಾ, ಸದಸ್ಯರಾದ ಜಗದೀಶ,ರಿಶಾ ಪಟವರ್ಧನ್,ರವಿಚ್ಚಂದ್ರ,ಅಶ್ವಿನಿ,ಎ.ರಾಮಣ್ಣ ಶೆಟ್ಟಿ, ವಿಮಲ ಎಚ್.ಎಸ್,ರಂಜಿನಿ,ವಿಶ್ವನಾಥ ಶೆಟ್ಟಿ, ಯಶೋಧ ಉಪಸ್ಥಿತರಿದ್ದರು.ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು. ಆಶಾ,ಅಂಗನವಾಡಿ ಕಾರ್ಯಕರ್ತೆಯರು,ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Related posts

ಮಂಜುಶ್ರೀ ಮುದ್ರಣಾಲಯದ ಮೇಲ್ವಿಚಾರಕ ವಿಶ್ವನಾಥ ಶೆಟ್ಟಿಯವರಿಗೆ ಬೀಳ್ಕೊಡುಗೆ

Suddi Udaya

ಪಟ್ರಮೆ: ಬಲ್ಲಿದಡ್ಡ ನಿವಾಸಿ ಸುರೇಶ್ ಗೌಡ ಆತ್ಮಹತ್ಯೆ ಶಂಕೆ

Suddi Udaya

ಕೆಪಿಎಸ್ ಪುಂಜಾಲಕಟ್ಟೆ ಪದವಿಪೂರ್ವ ವಿಭಾಗದ ಕಾಲೇಜು ವಾರ್ಷಿಕೋತ್ಸವ

Suddi Udaya

ಗೇರುಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಮಾರಿಪೂಜೆ

Suddi Udaya

ಉಜಿರೆ ರುಡ್ ಸೆಟ್ ನಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ ಕಾರ್ಯಕ್ರಮದ ಸಮಾರೋಪ

Suddi Udaya

ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ಸರ್ಕಲ್ ಸಮಿತಿ ವಾರ್ಷಿಕ ಮಹಾಸಭೆ, ಸಮಿತಿ ರಚನೆ

Suddi Udaya
error: Content is protected !!