September 6, 2026
Uncategorized

ಮುಂಡಾಜೆ ಗ್ರಾ.ಪಂ. ನ ಮೊದಲ ಹಂತದ ಗ್ರಾಮಸಭೆ

ಮುಂಡಾಜೆ:ಮುಂಡಾಜೆ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ‌ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಇವರ ಅಧ್ಯಕ್ಷತೆಯಲ್ಲಿ ಗ್ರಾಮ‌ ಪಂಚಾಯತ್ ಸಭಾಭವನದಲ್ಲಿ ಆ. 22 ನಡೆಯಿತು.

ಮುಂಡಾಜೆ ಆರೋಗ್ಯ ಇಲಾಖೆಗೆ ಖಾಯಂ ವೈದ್ಯಾಧಿಕಾರಿಯ ನೇಮಕವಾಗಬೇಕು. ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಕೆಲವೊಂದು ದಾಖಲೆಗೆ ಸಹಿ ಮಾಡಲು ಕೂಡ ಖಾಯಂ ವೈದ್ಯಾಧಿಕಾರಿ ಇರದಿರುವುದರಿಂದ ಸಮಸ್ಯೆ ಎದುರಾಗಿದೆ. ವೈದ್ಯಾಧಿಕಾರಿಯ ಮೊಬೈಲ್ ನಂಬರನ್ನು ಆಸ್ಪತ್ರೆಯ ಸಿಬ್ಬಂದಿಗಳು ಕೊಡುವುದಿಲ್ಲ ಯಾಕೆ? ವೈದ್ಯಾಧಿಕಾರಿ ಮೊಬೈಲ್ ನಂಬರನ್ನು ಬೋರ್ಡ್ ಮೇಲೆ ಹಾಕಬೇಕೆಂದು ನಾಮದೇವ್ ರಾವ್ ಆಗ್ರಹಿಸಿದರು.ಮಾರ್ಗದರ್ಶಿ ಅಧಿಕಾರಿಯಾಗಿ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿಯಾದ ಪ್ರತಿಮಾ ಅವರು ಗ್ರಾಮ ಸಭೆಯನ್ನು ಉತ್ತಮವಾಗಿ ನಡೆಸಿಕೊಟ್ಟರು. ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ ಎಲ್ಲರನ್ನು ಸ್ವಾಗತಿಸಿ,ಅನುಪಾಲನಾ ವರದಿ ಮತ್ತು ಜಮಾಖರ್ಚಿನ ವಿವಿರವನ್ನು ಸಭೆಯ ಮುಂದಿಟ್ಟರು.ಪಂಚಾಯತ್ ಉಪಾದ್ಯಕ್ಷೆ ಸುಮಲತಾ, ಸದಸ್ಯರಾದ ಜಗದೀಶ,ರಿಶಾ ಪಟವರ್ಧನ್,ರವಿಚ್ಚಂದ್ರ,ಅಶ್ವಿನಿ,ಎ.ರಾಮಣ್ಣ ಶೆಟ್ಟಿ, ವಿಮಲ ಎಚ್.ಎಸ್,ರಂಜಿನಿ,ವಿಶ್ವನಾಥ ಶೆಟ್ಟಿ, ಯಶೋಧ ಉಪಸ್ಥಿತರಿದ್ದರು.ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು. ಆಶಾ,ಅಂಗನವಾಡಿ ಕಾರ್ಯಕರ್ತೆಯರು,ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Related posts

ನಡ ಕುತ್ರೋಟ್ಟು ಬಳಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ: ಬಾಲಕ ಮೃತ್ಯು,

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಪಿಕಪ್ ಪಲ್ಟಿ

Suddi Udaya

ಕುಂಭಮೇಳದಲ್ಲಿ ಪವಿತ್ರ ಸ್ನಾನಗೈದ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಭಕ್ತರು

Suddi Udaya

ಮೇ 16: ಎಮ್.ಆರ್.ಪಿ.ಎಲ್ ಹಾಗೂ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ, ಬಿ.ವಿ.ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಇವರ ಆಶ್ರಯದಲ್ಲಿ ” ಉಚಿತ ಆರೋಗ್ಯ ತಪಾಸಣೆ ಶಿಬಿರ

Suddi Udaya

ಎಪಿಎಂಸಿ ನಿವೃತ್ತ ಕಾರ್ಯದರ್ಶಿ ವೆಂಕಪ್ಪ ಗೌಡ ಕೈಯಾಡಿ ನಿಧನ

Suddi Udaya

ಬೆಳ್ತಂಗಡಿ ಹಳೆಕೋಟೆ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನೂತನ ಕಟ್ಟಡ, ಸಭಾವನದ ಉದ್ಘಾಟನೆಗೆ: ಆದಿಚುಂಚನಗಿರಿ ಸ್ವಾಮೀಜಿಗಳನ್ನು ಆಹ್ವಾನಿಸಿ ಅವರ ದಿವ್ಯಹಸ್ತದಿಂದಲೇ ಕಟ್ಟಡವನ್ನು ಉದ್ಘಾಟಿಸುವಂತೆ – ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಮುಖಂಡರ ಆಗ್ರಹ

Suddi Udaya
error: Content is protected !!