29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಿಡಿಗಲ್ ನೇತ್ರಾವತಿ ನದಿಯಲ್ಲಿ ಸಿಕ್ಕಿಹಾಕಿಕೊಂಡ ದನಗಳ ರಕ್ಷಣೆ

ಕಲ್ಮಂಜ : ನಿಡಿಗಲ್ ನೇತ್ರಾವತಿ ನದಿಯಲ್ಲಿ ಏಕಾಏಕಿ ನೀರು ಏರಿಕೆ ಉಂಟಾದಾಗ ನದಿ ಮಧ್ಯದ ದಿಬ್ಬದಲ್ಲಿ ಸಿಲುಕಿದ್ದ ದನಗಳನ್ನು ರಕ್ಷಿಸಿದ ಘಟನೆ ಆ.21ರ ಸಂಜೆ ನಡೆದಿದೆ.

ನಿಡಿಗಲ್‌ನಲ್ಲಿ ಹರಿಯುವ ನೇತ್ರಾವತಿ ನದಿಯ ಮಧ್ಯದ ದಿಬ್ಬದಲ್ಲಿ ಮೂರು ದನಗಳು ಮೇಯುತ್ತಿದ್ದವು. ಈ ವೇಳೆ ನದಿಯಲ್ಲಿ ನೀರು ಏಕಾಏಕಿ ಏರಿಕೆಯಾಗಿದೆ. ನದಿಯ ಮಧ್ಯ ಭಾಗದಲ್ಲಿ ಸಿಲುಕಿದ್ದ ದನಗಳನ್ನು ಕರ್ತವ್ಯ ಮುಗಿಸಿ ದಿಡುಪೆ ಕಡೆ ಸರ್ವಿಸ್ ವಾಹನದಲ್ಲಿ ತೆರಳುತ್ತಿದ್ದ ಗೃಹರಕ್ಷಕ ದಳ ಮತ್ತು ಪ್ರವಾಹ ರಕ್ಷಣಾ ಪಡೆಯ ಚಾಕೋ ಕೆ.ಜೆ.ಅವರು ನೋಡಿದ್ದು ತಕ್ಷಣ ವಾಹನ ನಿಲ್ಲಿಸಿ ಜೀಪು ಚಾಲಕರಾದ ಮಾಜಿ ತಾ.ಪಂ.ಸದಸ್ಯ ಜಯರಾಮ ದಿಡುಪೆ ಹಾಗೂ ಪ್ರಸನ್ನ ಶಿಕ್ಷಣ ಸಂಸ್ಥೆಗಳ ಚಾಲಕ ಅಬೂಬಕರ್ ಅವರ ಜತೆ ನದಿಗೆ ಇಳಿದು ಈಜಿಕೊಂಡು ಹೋಗಿ ಹಗ್ಗದ ಮೂಲಕ ದನಗಳನ್ನು ನದಿಯ ಇನ್ನೊಂದು ಬದಿಗೆ ತಂದು ರಕ್ಷಣೆ ಮಾಡಿದ್ದಾರೆ.

Related posts

ಶಾಸಕ ಹರೀಶ್ ಪೂಂಜರಿಗೆ ವಿಚಾರಣೆಗೆ ಬರಲು ಪೊಲೀಸರು ನೋಟಿಸು ನೀಡಿಲ್ಲ: ಶಾಸಕರಿಗೆ ಗೃಹ ಬಂಧನದಂತೆ ಪೊಲೀಸರು ಮಾಡಿದ್ದಾರೆ

Suddi Udaya

ವೇಣೂರು ಶ್ರೀ ಧ.ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರ ಕೊಠಡಿ ಉದ್ಘಾಟನೆ

Suddi Udaya

ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿರುವ ಮನೋಹರ ಕುಮಾರ್ ರಿಗೆ ಹೆಚ್ಚುವರಿ ಹೊಣೆ ಹೊರಿಸಿ ಸರಕಾರ ಆದೇಶ

Suddi Udaya

ಶಿಶಿಲ: ಕೊಳಂಬೆ ನಿವಾಸಿ ಅಕ್ಕು ನಿಧನ

Suddi Udaya

ಎಕ್ಸೆಲ್ ಪ. ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ‘ ಸ್ವಾಗತಮ್ ‘ ಸಮಾರಂಭ

Suddi Udaya

ಅಂಡಿಂಜೆ: ಕಾರು ಡಿಕ್ಕಿ ಹೊಡೆದು 5 ವರ್ಷದ ಬಾಲಕ ಸಾವು

Suddi Udaya
error: Content is protected !!