ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಲಾಯಿಲ ಸೋಮವತಿ ಸೇತುವೆಯಲ್ಲಿ ಸಿಲುಕಿಕೊಂಡ ಮರಗಳ ತೆರವು ಕಾರ್ಯಾಚರಣೆ

Suddi Udaya

ಬೆಳ್ತಂಗಡಿ : ಲಾಯಿಲ ರಾಘವೇಂದ್ರ ಮಠದ ಸಮೀಪವಿರುವ ಸೋಮವತಿ ಸೇತುವೆಯಲ್ಲಿ ಸಿಲುಕಿಕೊಂಡ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯು ಶೌರ್ಯ ವಿಭಾಗದ ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ್ ರವರ ಮಾರ್ಗದರ್ಶನದಲ್ಲಿ ಆ.21 ರಂದು ಸ್ವಯಂ ಸೇವಕರಾದ ಮಂಜುನಾಥ್, ಜಯರಾಮ್, ಒಲ್ವಿನ್ ಡಿಸೋಜ, ಜೀವನ್ ಡಿಸೋಜ, ಎನ್ ಬಿ ಹರಿಶ್ಚಂದ್ರ, ವಸಂತ, ಅರ್ವಿನ್ ಮಿರಾಂದ, ಇವರೆಲ್ಲರೂ ಬಹಳ ಶ್ರಮಪಟ್ಟು ಮೆಷಿನ್ ಯಂತ್ರ ದಿಂದ ಮರಗಳನ್ನು ತೆರವು ಗೊಳಿಸುವ ಕಾರ್ಯಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಶೌರ್ಯ ವಿಭಾಗದ ಯೋಜನಾಧಿಕಾರಿಗಳಾದ ಕಿಶೋರ್ , ಬೆಳ್ತಂಗಡಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸೀತಾರಾಮ್ , ಘಟಕದ ಸಂಯೋಜಕರಾದ ವಸಂತಿ. ಉಪಸ್ಥಿತರಿದ್ದರು.

Leave a Comment

error: Content is protected !!